ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಕೃತಿ "ಕಂಬಳ ಲೋಕ-1" ಬಿಡುಗಡೆ
ಮೂಡುಬಿದಿರೆ : ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿಯಾಗಿರುವ ರಮ್ಯ ನಿತ್ಯಾನಂದ ಶೆಟ್ಟಿ ಅವರು ಕಂಬಳ ಸಾಧಕರ ಯಶೋಗಾಥೆ ಕುರಿತ ಚೊಚ್ಚಲ ಕೃತಿ "ಕಂಬಳ ಲೋಕ-1" ಬಿಡುಗಡೆಗೊಂಡಿತು.
ಸಿದ್ಧಕಟ್ಟೆ ಶ್ರೀ ಪದ್ಮ ಕ್ಲಿನಿಕ್ನ ಡಾ. ಪ್ರಭಾಚಂದ್ರ ಅವರು ಕೃತಿಯನ್ನು ಲೋಕಾರ್ಪಣೆಗೈದರು.
ಪಿಡಿಒ ಗಣೇಶ್ ಶೆಟ್ಟಿ ಗೋಳಿದೊಟ್ಟು, ಶಿಕ್ಷಕರಾದ ರಾಜೇಶ್ ರಾವ್ ನೆಲ್ಯಾಡಿ, ಪೊಡುಂಬ ಸರೋಜಿನಿ ಸಂಜೀವ ಶೆಟ್ಟಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಕೃತಿಗಾರ್ತಿ ರಮ್ಯ ಅವರ ಪತಿ, ಗುಬ್ಬಚ್ಚಿಗೂಡಿನ ನಿತ್ಯಾನಂದ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments