ಸತ್ಯನಾರಾಯಣ ಪೂಜೆಯಲ್ಲಿ ಸಾಧಕರಿಗೆ ಸನ್ಮಾನ

 ಸತ್ಯನಾರಾಯಣ ಪೂಜೆಯಲ್ಲಿ ಸಾಧಕರಿಗೆ ಸನ್ಮಾನ


ಮೂಡುಬಿದಿರೆ: ಇಲ್ಲಿನ ಕೋಟೆಬಾಗಿಲು ಸುಭಾಷ್ ನಗರ ಶ್ರೀ ದುರ್ಗಾಪರಮೇಶ್ವರಿ ಕೃಪಾ ನಿವಾಸದ 16 ನೇ ವರ್ಷದ  ಸತ್ಯನಾರಾಯಣ ಪೂಜೆ ಹಾಗೂ 4ನೇ ವರ್ಷದಿಂದ  ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು  ವೇದಮೂರ್ತಿ ರಾಮದಾಸ್ ಆಸ್ರಣ್ಣ, ಹಿರಿಯ ಪತ್ರಕರ್ತರಾದ ಧನಂಜಯ ಮೂಡುಬಿದಿರೆ, ಶಿವರಾಮ್ ಶೇರಿಗಾರ್ ಶಿಬರೂರು, ರಾಮು ಮಡಿವಾಳ ಬೆಳುವಾಯಿ ಹಾಗೂ ಸೀತಮ್ಮ ಪೂಜಾರ್ತಿ ಬಜಪೆ ಇವರನ್ನು  ದ.ಕ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ  ಸುದರ್ಶನ್.ಎಂ ಮೂಡುಬಿದಿರೆ, ವಾರ್ಡ್  ಸದಸ್ಯ ಪುರಂದರ ದೇವಾಡಿಗ, ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಮೋಕ್ತೆಸರ  ಆನಂದ ಹವಾಲ್ದಾರ್, ಕೇಶವ ಪೂಜಾರಿ, ಬೇಬಿ ಪೂಜಾರ್ತಿ, ಸುಮಿತ್ ಕೋಟ್ಯಾನ್, ಸುಪ್ರೀತ್ ಕೋಟ್ಯಾನ್  ಮತ್ತು ಕುಟುಂಬಸ್ಥರು ಸಾಧಕರನ್ನು  ಸನ್ಮಾನಿಸಿದರು.

ಕಾರ್ಕಳ ಪಡಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಶೋಭಾ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments

Advertisement