ಗಾಂಜಾ ಮಾರಾಟ ಆರೋಪಿಗಳ ಜಾಮೀನು ತಿರಸ್ಕೃತ
ಮೂಡುಬಿದಿರೆ: ತಾಲೂಕಿನ ಪ್ರಾಂತ್ಯ ಗ್ರಾಮದಲ್ಲಿ ಆಗಸ್ಟ್ 5 ರಂದು ಗಾಂಜಾ ಸಹಿತ ನಿಷೇಧಿತ ಮಾದಕ ದ್ರವ್ಯಗಳನ್ನು ಸಾರ್ವಜನಿಕರು ಮತ್ತು ವಿಧ್ಯಾರ್ಥಿಗಳಿಗೆ ಮಾರಾಟ ಮಾಡಲು ಸಿದ್ದತೆ ನಡೆಸಿ ಪೊಲೀಸರ ಅತಿಥಿಯಾಗಿದ್ದ ಆರೋಪಿಗಳ ಜಾಮೀನು ಅರ್ಜಿಯನ್ನು ಇಲ್ಲಿನ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ಆರೋಪಿಗಳಾದ ಕಲ್ಲಬೆಟ್ಟು ಗ್ರಾಮದ ಮೊಹಮ್ಮದ್ ಸಫನ್, ಹಂಡೇಲಿನ ಶಾ
ರೂಕ್ ಮತ್ತು ತೌಸೀಕ್ ಅವರು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಪೊಲೀಸರು
ಈ ಕುರಿತು ಮಾಹಿತಿ ಪಡೆದು ಬಂಧಿಸಿದ್ದರು. ಇದೀಗ
ಆರೋಪಗಳು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಸರಕಾರದ ಪರವಾಗಿ ಅಬಿಯೋಜಕಿ ಶೋಭಾ ಎಸ್ ವಾದಿಸಿದ್ದರು.
0 Comments