ಕೆ .ಪಿ.ಯಸ್. ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮೂಡುಬಿದಿರೆ: ಸ್ವಾತoತ್ರ್ಯ ದಿನಾಚರಣೆ ಪ್ರಯುಕ್ತ ತಾಲೂಕಿನ ಬಂಗಬೆಟ್ಟು ಕೆ. ಪಿ.ಎಸ್ ವಿದ್ಯಾ ಸಂಸ್ಥೆಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಆಧ್ಯಕ್ಷೆ ಪುಷ್ಪಾಲತಾ ಧ್ವಜರೋಹಣಗೈದರು. ಶಾಲೆಯ ಅಂಕಣಕ್ಕೆ ಅಳವಡಿಸಿದ ಇಂಟೆರ್ ಲಾಕ್ ಪ್ರಕಾಶ ಆಳ್ವ ಮಿಜಾರು ಗುತ್ತು ಇವರು ಉದ್ಘಾಟಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ತೆಂಕಮಿಜಾರು ಗ್ರಾ.ಪಂ.ನ ಸದಸ್ಯೆ ಲಕ್ಷ್ಮೀ ದಾಮೋದರ್ ಅಧ್ಯಕ್ಷತೆಯಲ್ಲಿ ಶಾಲೆಗೆ ಇಂಟೆರ್ ಲಾಕ್ ವ್ಯವಸ್ಥೆ ಮಾಡಿದ ಅಬ್ದುಲ್ ಖಾದರ್, ಮೊಹಮ್ಮದ್ ಅಶ್ರಫ್ ಹಾಗೂ ಆಟೋ ಮಾಲಕ ಚಾಲಕರ ಸಂಘ ತೋಡಾರು ಇವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಬಿ ರಾಜಶ್ರೀ, ಮಾಜಿ ಯೋಧ ಎಂ. ಜಿ .ಮೊಹಮ್ಮದ್, ಕೆಪಿಎಸ್ ವಿದ್ಯಾ ಸಂಸ್ಥೆಯ ಉಪ ಪ್ರಾಶುಪಾಲ ಚಂದ್ರು ಎಂ.ಎನ್, ವೀಣಾ ,ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಎಂ.ಎ ಆಸೀಫ್ ಇಕ್ಬಾಲ್,ಕೆ ಅಶ್ರಫ್. ಮಾಜಿ ಮೇಯರ್,ಅಸಿಫ್, ಅಶ್ರಫ್,ಟಿ ಎಚ್ ಇಸ್ಮಾಯಿಲ್,ಜಿ ಉಸೈನ್ ಮುಂತಾದ ಗಣ್ಯರು ಉಪಸ್ಥಿತ ರಿದ್ದರು.
ಶಿಕ್ಷಕಿ ಗೀತಾ ಸ್ವಾಗತಿದರು. ಅನುಪಮಾ ಕೆ ಕಾರ್ಯಕ್ರಮ ನಿರ್ವಹಿಸಿದರು. ಯಸ್ ನಾಗೇಶ ವಂದಿಸಿದರು.
0 Comments