ಜೈನ ಮುನಿ ಹಂತಕರನ್ನು ಎನ್ಕೌಂಟರ್ ಮಾಡಿ:ಸರ್ಕಾರಕ್ಕೆ ದಾವೂದ್ ಅಬುಬಕ್ಕರ್ ಆಗ್ರಹ
ಬೆಳಗಾವಿಯ ಚಿಕ್ಕೋಡಿಯಲ್ಲಿ ಜೈನ ಮುನಿ ಕಾಮಕುಮಾರ ಮಹಾರಾಜ ಮಹಾಮುನಿಗಳನ್ನು ಭೀಕರವಾಗಿ ಹತ್ಯೆ ಮಾಡಿದ ಹಂತಕರನ್ನು ಮುಲಾಜಿಲ್ಲದೆ ಎನ್ಕೌಂಟರ್ ಮಾಡಬೇಕೆಂದು ಉಡುಪಿ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬುಬಕ್ಕರ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಅವರು ಜೈನ ಮುನಿ ಹತ್ಯೆಯು ಮಾನವ ಕುಲವನ್ನೇ ತಲೆತಗ್ಗಿಸಿದೆ. ಇದು ನಮ್ಮ ಕುಲಕ್ಕೆ ಅವಮಾನ. ಹತ್ಯೆ ಆರೋಪಗಳನ್ನು ಎನ್ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ.
0 Comments