*ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ತನಿಖೆಗಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ಹಾಗೂ ಸಮಸ್ತ ಜೈನ ಸಮಾಜ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ಮಂಗಳೂರು ನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು*
ದಿಗಂಬರ ಜೈನ ಮುನಿಗಳಾದ ಪರಮಪೂಜ್ಯ ಮುನಿಶ್ರೀ 108 ಕಾಮಕುಮಾರನಂದಿ ಮುನಿಮಹಾರಾಜರ ಬರ್ಬರ ಹತ್ಯೆಯನ್ನು ಖಂಡಿಸಿ ಸಮಗ್ರ ಉನ್ನತವಾದ ತನಿಖೆಗಾಗಿ ಮತ್ತು ಜೈನ ಸಮಾಜದ ಉಳಿದ ಮುನಿಗಳಿಗೆ , ತ್ಯಾಗಿಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲು ಸರಕಾರ ಕ್ರಮ ಕೈಗೋಳ್ಳಬೇಕಾಗಿ ಭಾರತೀಯ ಜೈನ್ ಮಿಲನ್ ಮಂಗಳೂರು ವಿಭಾಗ ನೇತೃತ್ವದಲ್ಲಿ ಸಮಸ್ತ ಜೈನ ಸಮಾಜ ನಗರದಲ್ಲಿ 10-7-2023 (ಸೋಮವಾರ) ಮೌನ ಪ್ರತಿಭಟನಾ ಮೆರವಣಿಗೆ ನಡಿಸಿ ದ.ಕ ಜಿಲ್ಲಾಧಿಕಾರಿ ಮೂಲಕ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳದ ಶ್ರೀ ಸಿದ್ದರಾಮಯ್ಯ ಮನವಿ ಪತ್ರವನ್ನು ಸಲ್ಲಿಸಲಾಗಿತು.
ಈ ಸಂದರ್ಭದಲ್ಲಿ ಮೂಡುಬಿದಿರೆ ಜೈನಮಠದ ಪರಮಪೂಜ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸಿದ್ದರು.
ಪುಷ್ಪರಾಜ್ ಜೈನ್ ಮಂಗಳೂರು, ಸುರೇಶ್ ಬಲ್ಲಾಳ್ ಮಂಗಳೂರು, ಸುದರ್ಶನ್ ಜೈನ್ ಬಂಟ್ವಾಳ, ರತ್ನಾಕರ್ ಜೈನ್ ಮಂಗಳೂರು , ಜಗತ್ಪಾಲ್ ಜೈನ್, ಮಹಾವೀರ್ ಪ್ರಸಾದ್, ಶ್ವೇತಾ ಜೈನ್ ಮೂಡುಬಿದಿರೆ, ಸುಭಾಷ್ ಚಂದ್ರ ಜೈನ್ ಬಂಟ್ವಾಳ, ವರ್ಧಮನ್ ಜೈನ್, ಸುದೇಶ್ ಜೈನ್ ಮಕ್ಕಿಮನೆ ಸಹಿತ ಅನೇಕ ಗಣ್ಯರು, ಜೈನ ಸಮಾಜದ ಶ್ರಾವಕ - ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ನಗರದ ಕ್ಲಾಕ್ ಟವರ್ ನಿಂದ ಜಿಲ್ಲಾಧಿಕಾರಿ ಕಚೇರಿ ಯವರಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಯಿತು.
0 Comments