ನಿಧನ:
ಮುಳಿ ಬೆಟ್ಟು ಭೋಜರಾಜ ಶೆಟ್ಟಿ
ಮೂಡುಬಿದಿರೆ : ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಹಿರಿಯ ಪ್ರಬಂಧಕ, ಮೂಡುಬಿದಿರೆ ದಿಗಂಬರ ಜೈನ ವಿದ್ಯಾವರ್ಧಕ ಸಂಘದ ಆಶ್ರಿತ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಉಪಾಧ್ಯಕ್ಷ ಮುಳಿ ಬೆಟ್ಟು ಭೋಜರಾಜ ಶೆಟ್ಟಿ (90 ವರ್ಷ) ವಯೋ ಸಹಜ ಕಾಯಿಲೆಯಿಂದ
ಶುಕ್ರವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಸಿಂಡಿಕೇಟ್ ಬ್ಯಾಂಕ್ ನಲ್ಲಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ್ದ ಅವರು ಹಿರಿಯ ಪ್ರಬಂಧಕರಾಗಿ ನಿವೃತ್ತರಾಗಿದ್ದರು .ಬಳಿಕ ಮಣಿಪಾಲ್ ಫೈನಾನ್ಸ್ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಲಕಾಲ ತಮ್ಮದೇ ಖಾಸಗಿ ಫೈನಾನ್ಸ್ ಸಂಸ್ಥೆಯನ್ನು ಮುನ್ನಡೆಸಿದ್ದರು.
ಕಳೆದ ಒಂದೂವರೆ ದಶಕದಿಂದ ಡಿಜೆ ವಿವಿ ಸಂಘದ ಸದಸ್ಯರಾಗಿ, ಆಡಳಿತ ಮಂಡಳಿ ಸದಸ್ಯರಾಗಿ ಹಾಲಿ ಉಪಾಧ್ಯಕ್ಷರಾಗಿ ಅವರು ಸಕ್ರಿಯರಾಗಿದ್ದರು. ಅವರು ಪತ್ನಿ, ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ .
ಸಂತಾಪ :
ಭೋಜರಾಜ ಶೆಟ್ಟಿ ಅವರ
ಅಗಲಿಕೆಯ ಹಿನ್ನೆಲೆಯಲ್ಲಿ
ಡಿಜೆ ವಿವಿ ಸಂಘದ ಆಶ್ರಿತ ಶಿಕ್ಷಣ ಸಂಸ್ಥೆಗಳಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ತರಗತಿಗಳಿಗೆ ರಜೆ ಸಾರಲಾಗಿತ್ತು .
ಆಡಳಿತ ಮಂಡಳಿಯ
ಪ್ರಮುಖರು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ,ಮೃತರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು ಎಂದು ಡಿಜೆವಿವಿ ಸಂಘದ ಸಂಚಾಲಕ ಕೆ.ಹೇಮರಾಜ್ ತಿಳಿಸಿದ್ದಾರೆ.
0 Comments