ಕಡಂದಲೆಯಲ್ಲಿ ವನಮಹೋತ್ಸವ
ಮೂಡುಬಿದಿರೆ: ಮುಂಡ್ಕೂರು-ಕಡಂದಲೆ ಲಯನ್ಸ್ ಕ್ಲಬ್, ದ.ಕ. ಹಾಲು ಒಕ್ಕೂಟ, ಮುಂಡ್ಕೂರು ಭಾರ್ಗವ ಜೇಸೀಸ್, ಅರಣ್ಯ ಇಲಾಖೆ, ಗ್ರಾಮ ಆರಣ್ಯ ಸಮಿತಿ ಹಾಗೂ ಪಾಲಡ್ಕ ಗ್ರಾಪಂ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಡಂದಲೆ ಹೈಸ್ಕೂಲು ಪರಿಸರದಲ್ಲಿ ವನ ಹೋತ್ಸವ ಕಾರ್ಯಕ್ರಮ ನಡೆಯಿತು.
ದ.ಕ. ಹಾಲು ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಡಾ. ರವಿರಾಜ ಉಡುಪ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ವಿಶ್ವದೆಲ್ಲೆಡೆ ತಾಪಮಾನ ಏರಿಕೆಗೆ ಕಾಡು ನಾಶವಾಗುತ್ತಿರುವುದೇ ಮೂಲ ಕಾರಣ. ಇದನ್ನು ಹೋಗಲಾಡಿಸಿ ಶುದ್ಧ ಗಾಳಿ, ಜಲ, ಆಹಾರ ಬೆಳೆ ನಮಗೆ ಲಭಿಸಲು ನಾವು ಸಸ್ಯ ಸಂಪತ್ತನ್ನು ಬೆಳೆಸಬೇಕಾಗಿದೆ ಎಂದರು.
ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ, ಪ್ರೌಢಶಾಲೆಯ ಸಂಚಾಲಕ ಕೆ. ಸುದರ್ಶನ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆ ಕಡಂದಲೆ,
ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮಾತನಾಡಿ, ಕೃಷಿ, ಹೈನುಗಾರಿಕೆ ಉಳಿಯಲು, ನೆಲ, ಜಲ, ವನ್ಯ ಸಂಪತ್ತು ಬೇಕು. ಹಿರಿಯರ ಜೊತೆಗೆ ಮಕ್ಕಳೂ ಪ್ರಕೃತಿ ಪ್ರೀತಿಯನ್ನು ಬೆಳೆಸುವುದು ಅವಶ್ಯಕ ಎಂದರು.
ಮೂಡುಬಿದಿರೆ ಎಸಿಎಫ್ ಸತೀಶ್ ಎನ್., ವಲಯ ಆರಣ್ಯ ಅಧಿಕಾರಿ ಹೇಮಗಿರಿ ಅಂಗಡಿ, ಪಾಲಡ್ಕ ಗ್ರಾಪಂ ಅಧ್ಯಕ್ಷ ದಿನೇಶ್ ಕಾಂಗ್ಲಾಯಿ, ಉಪಾಧ್ಯಕ್ಷ ಸುಕೇಶ್ ಶೆಟ್ಟಿ, ದ.ಕ. ಹಾಲು ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಸೌಂದರ್ಯ, ಪಂ. ಕಾರ್ಯದರ್ಶಿ ಮೋಹಿನಿ, ಕಡಂದಲೆ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ, ಜೇಸೀಸ್ ಆಧ್ಯಕ್ಷ ಸುರೇಂದ್ರ ಭಟ್ ,ಮುಂಡ್ಕೂರು ಕಡಂದಲೆ ಲಯನ್ಸ್ ಅಧ್ಯಕ್ಷ ಸಂದೀಪ್ ಶೆಟ್ಟಿ ಸಚ್ಚೆರಪರಾರಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯಶಿಕ್ಷಕ ದಿನಕರ ಕುಂಭಾಶಿ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಕಾರ್ಯಕ್ರಮ ನಿರೂಪಿಸಿದರು. ಉಪವಲಯ ಅರಣ್ಯ ಅಧಿಕಾರಿ ಅಶ್ವಿತ್ ಗಟ್ಟಿ ವಂದಿಸಿದರು.
ಸಭಾ ಕಾರ್ಯಕ್ರಮದ ಮೊದಲು ಮತ್ತು ಬಳಿಕ ಕಡಂದಲೆ ಪ್ರೌಢಶಾಲೆಯ ಪರಿಸರದಲ್ಲಿ ಅತಿಥಿಗಳು, ಸಂಘಟಕರು ಉಪಯುಕ್ತ ಫಲ ಬರುವ ಗಿಡಗಳನ್ನು ನೆಟ್ಟರು. ಇತರ ಶಾಲೆಗಳ ಮುಖ್ಯಸ್ಥರು, ರೈತರ ಸಹಿತ ಗ್ರಾಮೀಣ ಮಂದಿಗೆ ಫಲಬಿಡುವ ಗಿಡಗಳನ್ನು ವಿತರಿಸಲಾಯಿತು.
0 Comments