ಇದನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಯುವ ನಾಯಕ ರಕ್ಷಿತ್ ಶಿವರಾಮ್ ಪರೋಕ್ಷವಾಗಿ ವಿರೋಧಿ ಪಕ್ಷ ಬಿಜೆಪಿಗೆ ಟಾಂಗ್ ಕೊಟ್ಟಿದ್ದರು. ಈ ಬಗ್ಗೆ ವೇಣೂರಿನಲ್ಲಿ ನಡೆದ ಕಂಬಳದ ಭಾಷಣದಲ್ಲಿ ಮಾತನಾಡಿದ ಅವರು "ಯಕ್ಷಗಾನದ ಬ್ಯಾನರ್ ಹರಿಯುವ ವಿಕೃತಿ ಮನಸ್ಸುಗಳು ನಮ್ಮ ನಡುವೆ ಇದ್ದಾರೆ" ಎಂದು ಹೇಳಿದ್ದರು. ಆದರೆ ಈಗ ಪ್ರಕರಣ ಕಾಂಗ್ರೆಸ್ ಪಕ್ಷದ ಸುತ್ತಲೇ ಗಿರಾಕಿ ಹೊಡೆದಿದ್ದು ಬ್ಯಾನರ್ ರಾಜಕೀಯ ಮಾಡಲು ಹೋದ ರಕ್ಷಿತ್ ಶಿವರಾಮ್ ಗೆ ಭಾರೀ ಮುಖಭಂಗ ಆಗಿದೆ.
ಬ್ಯಾನರ್ ಹರಿದು ಕೊಂಡೊಯ್ದದ್ದು ಸ್ವತಃ ಹಾಕಿದ ಕುಟುಂಬ ಎಂಬ ವಿಚಾರ ಬಹಿರಂಗವಾಗಿದೆ. "ತಮ್ಮ ಮನೆಯ ಹೆಸರಿನಲ್ಲಿ ಹಾಕಲಾದ ಬ್ಯಾನರ್ಗಳನ್ನು ನಾವು ತೆಗೆದಿದ್ದೇವೆ. ಇದನ್ನು ಕಳ್ಳತನ ಮಾಡಿದ್ದಲ್ಲ. ನಾವೇ ನಮ್ಮ ಹೆಸರಿನಲ್ಲಿ ಹಾಕಿದ ಬ್ಯಾನರ್ ಅದು" ಎಂದು ಬ್ಯಾನರ್ ಕೊಂಡೊಯ್ದ ಕುಟುಂಬಸ್ಥರು ತಿಳಿಸಿದ್ದಾರೆ.
ಸದ್ಯ ಬ್ಯಾನರ್ ತೆರವಾದ ವಿಚಾರ ಸುಖಾಂತ್ಯ ಕಂಡಿದ್ದು ಈಗ ಇದನ್ನು ರಾಜಕೀಯಕ್ಕಾಗಿ ಬಳಸಿದ ರಕ್ಷಿತ್ ಶಿವರಾಮ್ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು ಏನೋ ಮಾಡಲು ಹೋಗಿ ಏನೋ ಆಗಿರುವುದು ಸತ್ಯ.
0 Comments