ಮೂಡುಬಿದಿರೆ: ಇರುವೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಡೆಯಿತು.
ನಂತರ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರು 1.95 ಕೋ.ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ ಮತ್ತು 43.60ಲಕ್ಷ ವೆಚ್ಚದ ಕಾಂಕ್ರಿಟೀಕರಣಗೊಂಡ ರಸ್ತೆಗಳನ್ನು ಉದ್ಘಾಟಿಸಿ ಮಾತನಾಡಿ ಹಿಂದೆ ಕುಗ್ರಾಮದಂತಿದ್ದ ಇರುವೈಲು ಗ್ರಾಮದಲ್ಲಿ ಇದೀಗ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ.ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಕಾಯ್ದಿರಿಸಲಾಗಿದ್ದು ಕೆಲವೇ ದಿನಗಳಲ್ಲಿ ಭೂಮಿಪೂಜೆ ನಡೆಯಲಿದೆ.
ಮೂಲಭೂತ ಸೌಕರ್ಯಗಳಾದ ದಾರಿದೀಪ, ಕುಡಿಯುವ ನೀರು ಹಾಗೂ ಕಾಂಕ್ರೀಟೀಕರಣದ ರಸ್ತೆಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ ಈ ನಿಟ್ಟಿನಲ್ಲಿ ಈಗಾಗಲೇ ಕ್ಷೇತ್ರದಲ್ಲಿ 1800ಕೋಟಿಗೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಾ ಬಂದಿದೆ. ಮೂಡುಬಿದಿರೆ ತಾಲೂಕಿಗೆ ಕುಡಿಯುವ ನೀರಿನ ಯೋಜನೆಗೆ 100 ಕೋ. ರೂವನ್ನು ವಿನಿಯೋಗಿಸಲಾಗುತ್ತಿದೆ.ವಿಧಾನಸಭಾ ಕ್ಷೇತ್ರಕ್ಕೆ ೩೫ ಶಾಲಾ ಕೊಠಡಿಗಳನ್ನು ತರಲಾಗಿದ್ದು, ಅದರಲ್ಲಿ ಇರುವೈಲು ಗ್ರಾಮಕ್ಕೆ ೩ ಶಾಲಾ ಕೊಠಡಿಗಳನ್ನು ನೀಡಲಾಗಿದೆ ಎಂದ ಅವರು ಸರಕಾರದ ಹಣದಿಂದಲೇ ಎಲ್ಲಾ ಹಳ್ಳಿಗಳನ್ನು ಅಭಿವೃದ್ಧಿಗೊಳಿಸುವ ಇರಾದೆ ತನಗಿದ್ದು ಈಗಾಗಲೇ ಪ್ರಾಮಾಣಿಕವಾಗಿ ಕೆಲಸ ಮಾಡಿ ಶೇ 85ರಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರೈಸಿದ್ದೇನೆ ಎಂಬುದರ ಬಗ್ಗೆ ಹೆಮ್ಮೆ ಇದೆ ಎಂದರು.
ಇರುವೈಲ್ ಗ್ರಾ.ಪಂ.ಅಧ್ಯಕ್ಷ ವಲೇರಿಯನ್ ಕುಟಿನ್ಹಾ,ಪಂಚಾಯತ್ ಸದಸ್ಯರುಗಳಾದ ನವೀನ್ ಪೂಜಾರಿ, ನಾಗೇಶ್, ಮೋಹಿನಿ ಹಾಗೂ ಬಿಜೆಪಿ ಕಾರ್ಯಕರ್ತರಾದ ಹರೀಶ್ ಪ್ರಸಾದ್ ಶೆಟ್ಟಿ, ಬಾಲಚಂದ್ರ ಶೆಟ್ಟಿ, ಹರೀಶ್ ಕರ್ಕೆರಾ, ಹಿರಿಯರಾದ ಕಾಂತಪ್ಪ ಪೂಜಾರಿ, ಕುಂಡ ಪೂಜಾರಿ, ಬಾಲಕೃಷ್ಣ , ಎಸ್ ಡಿಎಂಸಿ ಅಧ್ಯಕ್ಷ ಶೇಖರ್, ಅಂಗನವಾಡಿ ಕಾರ್ಯಕರ್ತೆ ರೇಣುಕಾ ಮತ್ತಿತರರು ಈ ಸಂದರ್ಭದಲ್ಲಿದ್ದರು.-
ಪಂಚಾಯತ್ ವ್ಯಾಪ್ತಿಯ ದೇವರಗುಡ್ಡೆ, ಇರುವೈಲು ಶಾಲಾ ಬಳಿ, ಬಾರ್ದಿಲ ಮತ್ತು ಮಜ್ಜಿಗುರಿ ಬಳಿ ಜಲಜೀವನ್ ಮಿಷನ್ ಯೋಜನೆಯಲ್ಲಿ 1ಕೋಟಿ 35 ಲಕ್ಷ ರೂಪಾಯಿ ವೆಚ್ಚದಲ್ಲಿ ನೀರಿನ ಟ್ಯಾಂಕ್ ಗಳ ಕಾಮಗಾರಿಗೆ, ಇರುವೈಲು ಗ್ರಾಮದ ಪರಾರಿ ರಸ್ತೆ, ಕೋಂಟ್ರಡ್ಕ, ಬೋಲ್ಡೆ, ಕಂಗಿದೋಟ, ಸ್ಮಶಾನ ರಸ್ತೆ, ನೀರಕೊಳಂಬೆ ರಸ್ತೆ, ಪಡಂಬೋಡಿ ರಸ್ತೆ, ಕೊಪ್ಪಳ ರಸ್ತೆ, ದಿಡ್ದು ರಸ್ತೆಗಳ ಒಟ್ಟು ಸುಮಾರು 60 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳ ಶಿಲಾನ್ಯಾಸ.
ಇರುವೈಲು ಅಂಗನವಾಡಿ ದುರಸ್ಥಿ ಕಾಮಗಾರಿಯ ಉದ್ಘಾಟನೆ - 4.60 ಲಕ್ಷ*
ಕಾಂಕ್ರೀಟೀಕರಣಗೊಂಡಿರುವ ಮಜಲು ರಸ್ತೆಯ ಉದ್ಘಾಟನೆ - 10 ಲಕ್ಷ
ಕಾಂಕ್ರೀಟೀಕರಣಗೊಂಡಿರುವ ಮರ್ತಲೆ ರಸ್ತೆಯ ಉದ್ಘಾಟನೆ - 10 ಲಕ್ಷಕಾಳೂರ್ ಕಟ್ಟಣಿಗೆ ರಸ್ತೆ ಕಾಮಗಾರಿಯ ಉದ್ಘಾಟನೆ
0 Comments