ಮೂಡಬಿದಿರೆ: ಬಂಟರ ಸಂಘ ಆಶ್ರಯದಲ್ಲಿ ಬಂಟರ ಮಹಿಳಾ ಘಟಕವು ಸ್ಥಾಪನೆಯಾಗಿದ್ದು ಇದರ ಸ್ಥಾಪಕಾಧ್ಯಕ್ಷರಾಗಿ ಶ್ರೀಮತಿ ಶೋಭಾ ಎಸ್. ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಶ್ರೀಮತಿ ಸೌಮ್ಯ ಎಸ್. ಶೆಟ್ಟಿ, ಕೋಶಾಧಿಕಾರಿಯಾಗಿ ಶ್ರೀಮತಿ ಗೀತಾ ಪಿ. ಶೆಟ್ಟಿ, ಗೌರವಾಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ, ಗೌರವ ಸಲಹೆಗಾರರಾಗಿ ಶ್ರೀಮತಿ ಅಂಬಿಕಾ ಡಿ. ಶೆಟ್ಟಿ, ಶ್ರೀಮತಿ ಕಾಂತಿಲತಾ ಟಿ. ಶೆಟ್ಟಿ, ಶ್ರೀಮತಿ ಪ್ರಕಾಶಿನಿ ವಿ. ಹೆಗ್ಡೆ, ಶ್ರೀಮತಿ ಸೌಮ್ಯ ಎಮ್. ಶೆಟ್ಟಿ, ಶ್ರೀಮತಿ ಸುನೀತಾ ಎಸ್. ಶೆಟ್ಟಿ, ಶ್ರೀಮತಿ ಅಮಿತಾ ಡಿ. ಶೆಟ್ಟಿ, ಉಪಾಧ್ಯಕ್ಷರಾಗಿ ಶ್ರೀಮತಿ ರೂಪಾ ಎಸ್. ಶೆಟ್ಟಿ, ಶ್ರೀಮತಿ ಸುಜಾತ ಶೆಟ್ಟಿ, ಶ್ರೀಮತಿ ಪ್ರಫುಲ್ಲಾ ಶೆಟ್ಟಿ, ಜತೆ ಕಾರ್ಯದರ್ಶಿ ಗಳಾಗಿ ಶ್ರೀಮತಿ ಹರಿಣಾಕ್ಷಿ ಶೆಟ್ಟಿ, ಕುಮಾರಿ ಸೌಜನ್ಯ ಡಿ ಶೆಟ್ಟಿ ಸಾಂಸ್ಕ್ರತಿಕ ಕಾರ್ಯದರ್ಶಿ ಗಳಾಗಿ ಶ್ರೀಮತಿ ಅನಿತಾ ಶೆಟ್ಟಿ ಸಾಂಸ್ಕ್ರತಿಕ ಜತೆ ಕಾರ್ಯದರ್ಶಿ ಗಳಾಗಿ ಶ್ರೀಮತಿ ಸೌಮ್ಯ ಅರ್. ಶೆಟ್ಟಿ, ಶ್ರೀಮತಿ ಪದ್ಮಾವತಿ ಶೆಟ್ಟಿ, ಶ್ರೀಮತಿ ರೋಹಿಣಿ ಶೆಟ್ಟಿ, ಶ್ರೀಮತಿ ಲೋಲಾಕ್ಷಿ ಶೆಟ್ಟಿ, ಶ್ರೀಮತಿ ಮೋಹಿನಿ ಡಿ. ಶೆಟ್ಟಿ, ಕ್ರೀಡಾ ಕಾರ್ಯದರ್ಶಿ ಗಳಾಗಿ ಶ್ರೀಮತಿ ಸಂಗೀತಾ ಎಸ್. ಶೆಟ್ಟಿ, ಕ್ರೀಡಾ ಜತೆ ಕಾರ್ಯದರ್ಶಿ ಗಳಾಗಿ ಶ್ರೀಮತಿ ಹೇಮಲತಾ ಅರ್. ಶೆಟ್ಟಿ, ಶ್ರೀಮತಿ ಅಮೃತಾ ಪಿ. ಹೆಗ್ಡೆ, ಶ್ರೀಮತಿ ಸುಜಾತ ಶೆಟ್ಟಿ, ಶ್ರೀಮತಿ ನಿಶಾ ಶೆಟ್ಟಿ. ಆಯ್ಕೆ ಯಾಗಿರುತ್ತಾರೆ.ಹೋಟೇಲ್ ಪಂಚರತ್ನ ಇಂಟರ್ನ್ಯಾಷನಲ್ನಲ್ಲಿ ಪದಗ್ರಹಣ ಸಮಾರಂಭವು ಡಿ. 10ರಂದು ನಡೆಯಲಿದೆ.
ಮೂಡುಬಿದಿರೆ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಬಂಟವರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ, ಗೌರವಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಅಮರನಾಥ ಶೆಟ್ಟಿ, ಶ್ರೀಮತಿ ಕಾಂತಿಲತಾ ಶೆಟ್ಟಿ, ಬಜ್ಪೆ ಬಂಟರ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಪ್ರೊ. ಅಕ್ಷಯ ಆರ್. ಶೆಟ್ಟಿಯವರು ಭಾಗವಹಿಸಲಿದ್ದಾರೆ.
0 Comments