ಕೆದಂಬಾಡಿ ರಾಮಯ್ಯ ಗೌಡರ ಶೌರ್ಯದ ಪ್ರತಿಮೆ ನಿರ್ಮಾಣದ ಹಿಂದೆ ನಳಿನ್ ಕುಮಾರ್ ಅವರ ಶ್ರಮವಿದೆ:ಸಂಸದರ ಕಾರ್ಯ ಕೊಂಡಾಡಿದ ಶ್ರೀಗಳು

ಜಾಹೀರಾತು/Advertisment
ಜಾಹೀರಾತು/Advertisment

 


ಭಾರತದ ಪ್ರಥಮ ಸ್ವಾತಂತ್ಯ ಸಂಗ್ರಾಮ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ  ಮುಂಚೂಣಿ ನಾಯಕ, ಸಮರವೀರ ಕೆದಂಬಾಡಿ ರಾಮಯ್ಯ ಗೌಡರ ಕಂಚಿನ ಪ್ರತಿಮೆಯನ್ನು ಇಂದು ಮಂಗಳೂರಿನ ಬಾವುಟ ಗುಡ್ಡದಲ್ಲಿ ಅನಾವರಣಗೊಳಿಸಲಾಯಿತು.

 ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಪೂಜ್ಯ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಈ ಪ್ರತಿಮೆ ಅನಾವರಣದ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ಪರಿಶ್ರಮ ಇದೆ. ಇಷ್ಟೊಂದು ಅಂದವಾಗಿ ಲಾಜಿಕಲ್ ಎಂಡ್‌ಗೆ ತಲುಪಲು ನಳಿನ್ ಕೊಡುಗೆ ಅಪಾರ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಮಾನ್ಯ ಮುಖ್ಯಮಂತ್ರಿಗಳಾದ  ಶ್ರೀ  ಬಸವರಾಜ ಎಸ್ ಬೊಮ್ಮಾಯಿ,ಸಚಿವ ಎಸ್.ಅಂಗಾರ, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ, ಶಾಸಕರಾದ ಹರೀಶ್ ಪೂಂಜಾ,ವೇದವ್ಯಾಸ ಕಾಮತ್ ಸಹಿತ ಇತರ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments