ಕರಾವಳಿ ಜಿಲ್ಲೆಯ ಜನರ ಬದ್ಧತೆಯಿಂದಾಗಿ ಯಕ್ಷಗಾನ ಮತ್ತಷ್ಟು ಬೆಳೆಯುತ್ತಾ ಬಂದಿದೆ- ಅರಗ ಜ್ಞಾನೇಂದ್ರ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ದೈವೀ ಶಕ್ತಿಯನ್ನು ಹೊಂದಿರುವ ಯಕ್ಷಗಾನ ಜಗತ್ತಿನಲ್ಲೇ ಶ್ರೀಮಂತವಾದ ಕಲೆ.ಇಂದು ಹಲವು ಜಾನಪದ ಕಲೆಗಳು ಆಧುನಿಕತೆಯ ಭರಾಟೆಯಲ್ಲಿ ಅಂತ್ಯ ಕಂಡಿದ್ದರೂ, ಕರಾವಳಿ  ಜಿಲ್ಲೆಯ  ಜನರ ಬದ್ಧತೆಯಿಂದಾಗಿ ಯಕ್ಷಗಾನ ಕಲೆಯು ಹೊಸ ಹೊಸದಾದ ರೀತಿಯಲ್ಲಿ  ಮತ್ತಷ್ಟು ಬೆಳೆಯುತ್ತಾ ಬಂದಿದೆ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದರು.

  ಅವರು ಬೆಳುವಾಯಿಯ ಯಕ್ಷದೇವ ಮಿತ್ರ ಕಲಾ ಮಂಡಳಿ(ರಿ) ಇದರ ರಜತ ಮಹೋತ್ಸವದಂಗವಾಗಿ ವಿದ್ಯಾಗಿರಿಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ  ರಾತ್ರಿ ನಡೆದ ಶ್ರೀ ದೇವಿ ಮಹಾತ್ಮೆ ಜೋಡಾಟದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ 

ಎಂ.ಕೆ.ರಮೇಶ್ ಆಚಾರ್ಯ ಅವರು ಬರೆದಿರುವ "ಶ್ರೀ ಕೃಷ್ಣ ದೇವರಾಯ" ಪ್ರಸಂಗವನ್ನು ಬಿಡುಗಡೆಗೊಳಿಸಿ ಮಾತನಾಡಿದರು. 

ಎಡನೀರು ಮಠದ ಸಚ್ಚಿದಾನಂದ ಭಾರತೀನಂದ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಕೋಲ ಕಂಬಳ ಸಂಗೀತಗಳು ಸಂಸ್ಕೃತಿಗಳನ್ನು ಸಾರುವ ಮಹತ್ವದ ಸಾಧನಗಳ ಪೈಕಿ ಯಕ್ಷಗಾನವು ಒಂದು.ಹಿರಿಯ ಯಕ್ಷಗಾನ ಸಾಧಕರನ್ನು ಸನ್ಮಾನಿಸುವ ಮೂಲಕ ಯಕ್ಷಗಾನದ ಶ್ರೀಮಂತಿಕೆಯನ್ನು ಎಲ್ಲರಿಗೆ ಪರಿಚಯಿಸುವ ಕಾರ್ಯ ಈ ಕಾರ್ಯಕ್ರಮದಲ್ಲಾಗಿದೆ ಎನ್ನುವುದೇ ಖುಷಿಯ ವಿಚಾರ ಎಂದು ನುಡಿದರು.

 ಮೂಡುಬಿದಿರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕಟೀಲು ದೇವಸ್ಥಾನದ ಅರ್ಚಕ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನ ನೀಡಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಧಾರ್ಮಿಕ ಧತ್ತಿ ಇಲಾಖೆಯ ನಿವೃತ್ತ ಆಯುಕ್ತ ಟಿ.ಶ್ಯಾಮ ಭಟ್ ನೇತೃತ್ವದಲ್ಲಿ ಯಕ್ಷದೇವ ಮಿತ್ರ ಕಲಾ ಮಂಡಳಿಯ ಗೌರವಾಧ್ಯಕ್ಷ, ಉದ್ಯಮಿ ಶ್ರೀಪತಿ ಭಟ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹಾಗೂ ಯಕ್ಷ ಸಾಧಕರಾದ ಡಾ.ಎಂ.ಪ್ರಭಾಕರ ಜೋಷಿ, ಪದ್ಯಾಣ ಶಂಕರನಾರಾಯಣ ಭಟ್ ಹಾಗೂ ಕೆ.ಗೋವಿಂದ ಭಟ್ ಅವರನ್ನು ಸನ್ಮಾನಿಸಲಾಯಿತು.

ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ,   ಕಸಾಪದ ಮಾಜಿ ಅಧ್ಯಕ್ಷ  ಹರಿಕೃಷ್ಣ ಪುನರೂರು, ಆಲಂಗಾರು ದೇವಸ್ಥಾನದ ಫ್ರಧಾನ ಅರ್ಚಕ ಈಶ್ವರ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

  ಯಕ್ಷದೇವ ಮಿತ್ರ ಕಲಾ ಮಂಡಳಿಯ ಅಧ್ಯಕ್ಷ ದೇವಾನಂದ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಮಚಂದ್ರ ಮಿಜಾರು ಮತ್ತು ವಿದ್ವಾನ್ ಗಾಳಿಮನೆ ವಿನಾಯಕ ಭಟ್ ಅಭಿನಂದನಾ ಭಾಷಣಗೈದರು. ಆರ್ .ಜೆ ಪ್ರಸನ್ನ ಮತ್ತು ರಮ್ಯ ರಾವ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments