ಮೂಡುಬಿದಿರೆ: ವಿವಿ ಕಾಲೇಜು, ಬನ್ನಡ್ಕ- ಮೂಡುಬಿದಿರೆ(ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು) ಇಲ್ಲಿ ಎನ್.ಎಸ್.ಎಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟನೆ ಶನಿವಾರ ನಡೆಯಿತು.
ಶಾಸಕ ಉಮಾನಾಥ ಕೋಟ್ಯಾನ್ ಘಟಕಗಳನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಸಮಾಜ, ಸಮುದಾಯ ಮತ್ತು ಹೊರಜಗತ್ತನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೆ ಏನೇ ಕಷ್ಟ ಬಂದರೂ ಅದನ್ನು ಎದುರಿಸುವ ಅತ್ಮಸ್ಥೈರ್ಯ ನಿಮ್ಮಲ್ಲಿ ಮೂಡುತ್ತದೆ. ತುಂಬಾ ಕಷ್ಟ ಪಟ್ಟು ಮೂಡುಬಿದಿರೆಗೆ ಪದವಿ ಕಾಲೇಜು ಮತ್ತು ಅಳಿಯೂರಿಗೆ ಪ.ಪೂ.ಕಾಲೇಜನ್ನು ತಂದಿದ್ದೇನೆ ಆದ್ದರಿಂದ ಮಜಾ ಮಾಡಲು ಕಾಲೇಜಿಗೆ ಬರಬೇಡಿ ವಿದ್ಯೆಯನ್ನು ಕಲಿತು ಉತ್ತಮ ಭವಿಷ್ಯವನ್ನು ರೂಪಿಸುವತ್ತ ನಿಮ್ಮ ಚಿತ್ತವಿರಲಿ ಹಾಗೂ ನಿಮ್ಮ ಹೆತ್ತವರ, ಶಾಲೆಯ ಉಪನ್ಯಾಸಕರ ಮತ್ತು ನನ್ನ ಭರವಸೆಯನ್ನು ಈಡೇರಿಸಿ ಎಂದರು.
ಮಂಗಳೂರು ವಿವಿಯ ಕುಲಪತಿ ಪ್ರೊ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾರೀರಿಕ, ಮಾನಸಿಕ, ಬೌಧಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ನೆಲೆಗಳಲ್ಲಿ ವ್ಯಕ್ತಿತ್ವ ವಿಕಸನಗೊಂಡಾಗ ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದರು.
ಸನ್ಮಾನ: ನಿವೃತ್ತಿ ಹೊಂದಲಿರುವ ಪಾಡ್ಯಾರು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ವಾಸುದೇವ ಆಚಾರ್ಯ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಮಂಗಳೂರು ವಿವಿಯ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ನಾಗರತ್ನ, ದ.ಕ.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಯುವ ವಿಭಾಗದ ಸಂಯೋಜಕ ಸಚೇತ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ವಿವಿ ಕಾಲೇಜು ಬನ್ನಡ್ಕ ಇದರ ಯುವ ರೆಡ್ ಕ್ರಾಸ್ ನ ಕಾರ್ಯಕ್ರಮಾಧಿಕಾರಿ ಪುಷ್ಪಲತಾ ಉಪಸ್ಥಿತರಿದ್ದರು.
ಬನ್ನಡ್ಕ ವಿವಿ ಕಾಲೇಜಿನ ಸಂಯೋಜನಾಧಿಕಾರಿ ಡಾ.ಗಣಪತಿ ಗೌಡ ಸ್ವಾಗತಿಸಿದರು. ಉಪನ್ಯಾಸಕಿ ಆಶಾ ಶಾಲೆಟ್ ಡಿ"ಸೋಜಾ ಕಾರ್ಯಕ್ರಮ ನಿರೂಪಿಸಿದರು.ಕಾಲೇಜಿನ ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿ ಪೊನ್ನಣ್ಣ ಸಿ.ಪಿ.ವಂದಿಸಿದರು.
0 Comments