ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ಅಗತ್ಯ-ಶಾಸಕ ಕೋಟ್ಯಾನ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಇಲ್ಲಿನ ಸ.ಹಿ.ಪ್ರಾ.ಶಾಲೆ ನೀರ್ಕೇರೆ ಸ್ವಾತಂತ್ರ್ಯ ಅಮೃತಾ ಮಹೋತ್ಸವದ ಅಂಗವಾಗಿ ನೂತನವಾಗಿ ನಿರ್ಮಾಣಗೊಂಡಿರುವ ಸಂಸ್ಮರಣಾ ಭವನದ ಲೋಕಾರ್ಪಣೆ ಹಾಗೂ ಲಯನ್ಸ್ ಕ್ಲಬ್ ನಿಡ್ಡೋಡಿ-ಕಲ್ಲಮುಂಡ್ಕೂರು ಇವರು ಕೊಡುಗೆಯಾಗಿ ನೀಡಿರುವ  ಕಂಪ್ಯೂಟರ್ ಗಳನ್ನು ಶಾಸಕ ಉಮಾನಾಥ್ ಎ ಕೋಟ್ಯಾನ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಸರಿಯಾದ ವಿದ್ಯೆ-ಬುದ್ದಿ ನೀಡಿ ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ಅಗತ್ಯ. ನಮ್ಮ ದೇಶದಲ್ಲಿರುವ ಮಹಾನ್ ವ್ಯಕ್ತಿಗಳು, ಅನೇಕ ಪ್ರೇಕ್ಷಣೀಯ ಸ್ಥಳಗಳು ಮತ್ತು ಅಚ್ಚಳಿಯದೇ ಉಳಿದಿರುವ ಹಲವಾರು ಪ್ರಾಚೀನ ವಸ್ತು ಸಂಗ್ರಹಾಲಯಗಳು ಇವೆಲ್ಲದರ ಬಗ್ಗೆ ವಿದ್ಯಾರ್ಥಿಗಳು ಅರಿಯಬೇಕೆಂಬ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ತರಲಾಗಿದೆ. ಇದುವರೆಗೂ ನಮ್ಮ ದೇಶವನ್ನು ಲೂಟಿ ಮಾಡಿದ ಪಾಶ್ಚಿಮಾತ್ಯರ ಬಗ್ಗೆ ತಿಳಿದುಕೊಂಡಿದ್ದೆವೆ, ಆದರೆ ನಮ್ಮ ದೇಶದಲ್ಲಿ ಹುಟ್ಟಿ ಅನೇಕ ತ್ಯಾಗ, ಬಲಿದಾನ,ಸೇವೆಗಳನ್ನು ಮಾಡಿದ ಅನೇಕ ಮಹಾನ್ ಪುರುಷರಿದ್ದಾರೆ, ನಮ್ಮ ದೇಶದ ಸಂಸ್ಕೃತಿ ಪ್ರಕೃತಿಗೆ ಮಾದರಿಯಾಗುವಂತಹ ಸಂಸ್ಕೃತಿ ಹಾಗಾಗಿ ರಾಷ್ಟ್ರೀಯತೆ ಶಿಕ್ಷಣ ಇಂದಿನ ಮಕ್ಕಳಿಗೆ ನೀಡಬೇಕು ಎಂದರು.

ತೆಂಕಮಿಜಾರು ಗ್ರಾ.ಪಂ. ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು.

 ಇದೇ ಸಂದರ್ಭದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶೂಗಳನ್ನು ವಿತರಿಸಲಾಯಿತು.

ನಿಡ್ಡೋಡಿ-ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲಾಜರತ್ ಡಿಕೋಸ್ತ,   ಪಂಚಾಯತ್ ಉಪಾಧ್ಯಕ್ಷೆ ಶಮಿತಾ ಶೆಟ್ಟಿ ಸದಸ್ಯರುಗಳಾದ ನಿಶಾ ಶೆಟ್ಟಿ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಶ್ .ಎಸ್, ಜಿ.ಪಂ.ಇಂಜಿನಿಯರ್ ವಿಶ್ವನಾಥ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ದಿನೇಶ್, ಬಿ.ಆರ್.ಸಿ ಸೌಮ್ಯ, ಸಿ.ಆರ್.ಪಿ.ಗೋಪಾಲ್, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಡಾ.ಪ್ರತಿಮಾ,  ಗುತ್ತಿಗೆದಾರ ಬಿ.ಕೆ.ಮಹಮ್ಮದ್ ಶರೀಫ್ ಮತ್ತಿತರರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ ಸ್ವಾಗತಿಸಿದರು. ಶಿಕ್ಷಕಿ ಹೆಲೆನ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಶಿಕ್ಷಕ ವಿರೇಶ್ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಯಮುನಾ ವಂದಿಸಿದರು.

Post a Comment

0 Comments