ಮೂಡುಬಿದಿರೆ ಒಂಟಿಕಟ್ಟೆಯಲ್ಲಿ 70 ಜೋಡಿ ಕೋಣಗಳೊಂದಿಗೆ ಕುದಿ ಕಂಬಳ

ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ಕಡಲಕೆರೆಯ ಬಳಿ ಇರುವ ಕೋಟಿ-ಚೆನ್ನಯ ಜೋಡುಕರೆಯಲ್ಲಿ ಭಾನುವಾರ ಕುದಿ ಕಂಬಳ ನಡೆಯಿತು.

 ರಾಜ್ಯ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತರಾದ ಅತಿವೇಗದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಹೊಕ್ಕಾಡಿಗೋಡಿ ಹಕ್ಕೇರಿ ಸುರೇಶ್ ಶೆಟ್ಟಿ ಸಹಿತ ಬೈಂದೂರು ವಿಶ್ವನಾಥ ದೇವಾಡಿಗ, ಹೊಸಂಗಡಿ ಪ್ರಮೋದ್ ಕೋಟ್ಯಾನ್ , ಬಂಗಾಡಿ ಹಮೀದ್ , ಅಳದಂಗಡಿ ರವಿ ಕುಮಾರ್ , ನತೇಶ್ ಬಾರಾಡಿ, ಶ್ರೀಧರ್ ಮರೋಡಿ, ಕೋರಿಂಜೆ ಅರುಣ್ ಶೆಟ್ಟಿ, ರೋಹಿತ್, ಯುವ ಓಟಗಾರ ರಿತೇಶ್ ಒಂಟಿಕಟ್ಟೆ ಮುಂತಾದ ಓಟಗಾರರು ಕೋಣಗಳನ್ನು ಓಡಿಸಿದರು. 

ಜಿಲ್ಲಾ ಕಂಬಳ ಅಕಾಡೆಮಿಯ ಸಂಚಾಲಕ ಗುಣಪಾಲ ಕಡಂಬ, ಕೋಣಗಳ ಯಜಮಾನರುಗಳಾದ ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ, ಇರುವೈಲ್ ಪಾಣಿಲ ಸತೀಶ್ಚಂದ್ರ ಸಾಲ್ಯಾನ್,  ಬೇಲಾಡಿ ಬಾವ ಅಶೋಕ್ ಶೆಟ್ಟಿ, ಚಂದ್ರಹಾಸ ಸನಿಲ್ , ಹರ್ಷವರ್ಧನ್ ಪಡಿವಾಳ್, ಬೆಳ್ಳಿಪ್ಪಾಡಿ ಕೇಶವ ಮಾಂಕು ಭಂಡಾರಿ,ಕೌಡೂರು ಬೀಡು ತುಷಾರ್ ಮಾರಪ್ಪ ಭಂಡಾರಿ, ಅಂತರ್ಜಾಲು ಶ್ರೀನಿವಾಸ ಬಿರ್ಮಲ ಶೆಟ್ಟಿ,ಚೊಕ್ಕಾಡಿ-ಕಟಪಾಡಿ ಸಂತೋಷ್ ಶೆಟ್ಟಿ,  ಮಾರ್ನಾಡ್ ರಾಜೇಶ್  ಈ ಸಂದರ್ಭದಲ್ಲಿದ್ದರು.


ಬರುವ ತಿಂಗಳಿನಿಂದ ಕಂಬಳ ಋತು ಆರಂಭಗೊಳ್ಳಲಿದ್ದು ಈ ನಿಟ್ಟಿನಲ್ಲಿ ಸುಮಾರು 70 ಜೋಡಿ ಕೋಣಗಳು ಈ ಕುದಿ ಕಂಬಳದಲ್ಲಿ ಪಾಲ್ಗೊಂಡಿದ್ದವು.

Post a Comment

0 Comments