ಜೈನ ಧರ್ಮದಿಂದ ಭಗವಂತನ ಸಾಕ್ಷಾತ್ಕಾರ -ಡಾ|ಡಿ ವಿರೇಂದ್ರ ಹೆಗ್ಗಡೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ :ಮೂಡುಬಿದಿರೆ ಜೈನ್ ಮಿಲನ್ ವಲಯ-8ರ 19ನೇ ವಲಯ ಸಮ್ಮೇಳನವನ್ನು ಭಾನುವಾರ ಎಕ್ಸಲೆಂಟ್ ಕಾಲೇಜಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು  

 ಮೂಡುಬಿದಿರೆ ಜೈನ ಮಠದ ಭಾರತ ಭೂಷಣ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಆಶೀರ್ವಚನ ನೀಡಿ,

ಈ ನೆಲದ ಸ್ವಾಭಿಮಾನದ ಬದುಕು ತೋರಿಸಿದ ಜೈನ ಮಿಲನ ಧರ್ಮಮುಖಿಯಾಗಿ ಕೆಲಸ ಮಾಡುತ್ತಿದೆ. ಈ ಕೆಲಸಗಳು ಹೀಗೇ ಮುಂದುವರಿಯಲಿ. ಭಜನೆ, ಸತ್ಸಂಗ ಮನೆ ಮನೆಗಳಲ್ಲಿ, ಮಠಗಳಲ್ಲಿ ಮುಂದುವರಿಸುವ ಸಂಕಲ್ಪ ನಮ್ಮದಾಗಲಿ ಎಂದರು.

   ಇದೇ ಸಂದರ್ಭದಲ್ಲಿ ಕ್ರಿಯಾಶೀಲ ಸಾಧನೆಗೆ ಕೊಡಮಾಡುವ ರಾಜ್ಯ ಮಟ್ಟದ ಮಿಲನಶ್ರೀ ಪ್ರಶಸ್ತಿಯನ್ನು ಎಕ್ಸಲೆಂಟ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಯುವರಾಜ ಜೈನ್ ಪ್ರಶಸ್ತಿ ಪ್ರದಾನ.

   ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ಮಾತನಾಡಿ ಜೈನ ಅರಸರ ಆಳ್ವಿಕೆ ಕಂಡು ಮೂಡುಬಿದಿರೆ-ಕಾರ್ಕಳ ಕ್ಷೇತ್ರ ಹಲವು ಸಮಾಜಮುಖಿ ಚಿಂತನೆ, ಸಾಹಿತ್ಯ, ಶಿಲ್ಪಕಲೆಯಿಂದ ವಿಶ್ವಮಾನ್ಯವಾಗಿದೆ. ಅಂತಹ ಸಂಸ್ಕಾರದ ಮಣ್ಣಿನಿಂದ ಚೇತನಗೊಂಡಿರುವ ಮೂಡುಬಿದಿರೆಯಲ್ಲಿ ಬದುಕು ಹಾಗೂ ಬದುಕಲು ಬಿಡು ಎಂಬ ಘೋಷಣೆಯು ನಡೆಯುತ್ತಿದೆ ಈ ಜೈನ ಮಿಲನ ನನಗೋಸ್ಕರ ಬದುಕದೆ ಸಮಾಜಕ್ಕೋಸ್ಕರ ಬದುಕು ಎಂಬ ನಿಲುವನ್ನು ಹೊಂದಿರುವುದು ಸಂತೋಷದ ಇಂತಹ ನಿಲುವು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಬೇಕಾದ ಒಳ್ಳೆಯ ಅಡಿಪಾಯ ಹಾಕಬೇಕು.

ಇದೇ ಸಂದರ್ಭದಲ್ಲಿ ಚೂಡಾಮಣಿ ಸ್ಮರಣ ಸಂಚಿಕೆಯನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಧರ್ಮಸ್ಥಳ ಸುರೇಂದ್ರ ಕುಮಾರ್ ಬಿಡುಗಡೆಗೊಳಿಸಿದರು.

  ಭಾರತೀಯ ಜೈನ್ ಮಿಲನದ ಅಧ್ಯಕ್ಷರಾದ ಪುಷ್ಪರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಭಾಗ ಉಪಾಧಕ್ಷ ಸುದರ್ಶನ್ ಜೈನ್, ಕಾರ್ಯಾಧ್ಯಕ್ಷ ಕೆ ಪ್ರಸನ್ನ ಕುಮಾರ್, ಪ್ರಧಾನಕಾರ್ಯದರ್ಶಿ ರಾಜೇಶ್ ಎಂ, ಮೂಡುಬಿದಿರೆ ಜೈನ್ ಮಿಲನ್ ಅಧ್ಯಕ್ಷ ನಮಿರಾಜ ಜೈನ್.

Post a Comment

0 Comments