ಸುರತ್ಕಲ್ ಟೋಲ್‌ಗೇಟ್ ವಿವಾದ:20 ದಿನದಲ್ಲಿ ತೆರವು:ರಾಜಕೀಯ ಮಾಡಬೇಡಿಯೆಂದ ಸಂಸದರು

ಜಾಹೀರಾತು/Advertisment
ಜಾಹೀರಾತು/Advertisment


 ಮಂಗಳೂರಿನ ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ಬಂದ್ ಮಾಡುವ ವಿಚಾರ ಅಥವಾ ಅದನ್ನು ತೆರವುಗೊಳಿಸುವ ವಿಚಾರವಾಗಿ ಇಂದು ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಹೇಳಿಕೆಯನ್ನು ನೀಡಿದ್ದಾರೆ. ನಮ್ಮ ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸುವ ವಿಚಾರದಲ್ಲಿ ನಾವು ಭಾರತೀಯ ಜನತಾ ಪಾರ್ಟಿಯ ನಾಯಕರಾಗಿ ಮುಂಚೂಣಿಯಲ್ಲಿ ಹೋರಾಟ ಮಾಡುತ್ತೇವೆ ಮತ್ತು ಆಗ್ರಹಿಸಿದ್ದೇವೆ. ಈ ಬಗ್ಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ಮನವಿ ಮಾಡಿದ್ದು ನಾವೇ ಅದನ್ನು ತೆರವುಗೊಳಿಸುವಲ್ಲಿ ಹೋರಾಟ ಮಾಡಿದ್ದು ನಾವೇ ಈ ಬಗ್ಗೆ ಸ್ವತಃ ನಿತಿನ್ ಗಡ್ಕರಿಯವರೇ ತೆರವುಗೊಳಿಸುವ ಬಗ್ಗೆ ಮಾತುಗಳನ್ನು ಮತ್ತು ಭರವಸೆಯನ್ನು ನೀಡಿದ್ದು ಅದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ನಡೆಯುತ್ತಿವೆ. ಅದು NMPT ರಸ್ತೆಯಾಗಿರುವ ಕಾರಣ ಇದರಲ್ಲಿ ಟೋಲ್ ಸಂಗ್ರಹವು ಆಗುತ್ತಿತ್ತು. ಮುಂದಿನ ಅದರ ಮೇಂಟೆನೆನ್ಸ್ ಖರ್ಚುಗಳನ್ನು ಯಾರೊಬ್ಬರು ಭರಿಸುತ್ತಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು ಈ ಇದರ ವಿಚಾರವಾಗಿ ಸಭೆಗಳು ನಡೆಯುತ್ತಿದೆ. ಇನ್ನೊಂದು ಹದಿನೈದು ದಿನಗಳ ಅವಧಿಯಲ್ಲಿ ಈ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿದ್ದು ನಂತರ ಟೋಲ್ ಗೇಟ್ ತೆರವುಗೊಳಿಸಲಾಗುವುದು. ಇಲ್ಲವಾದರೆ ನಾನೇ ಸ್ವತಹ ಕಾನೂನಾತ್ಮಕವಾಗಿ ಕೋರ್ಟಿಗೆ ಹೋಗಲು ತಯಾರಾಗಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಮಾತ್ರವಲ್ಲದೆ ಟೋಲ್ ಗೇಟ್ ರಚನೆಯಾಗಿದ್ದು 2013 UPA ಅಧಿಕಾರ ಅವಧಿಯಲ್ಲಿ ಅಂದು ಸ್ವತಹ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರೇ ಕೇಂದ್ರ ಸಚಿವರಾಗಿದ್ದರು ಆದರೆ ಇಂದು ಅವರ ಕಾರ್ಯಕರ್ತರೇ ಇದರ ವಿರುದ್ಧ ಗುಡುಗುವುದು ರಾಜಕೀಯವಲ್ಲದೆ ಮತ್ತೇನೂ ಅಲ್ಲ ಎಂದು ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.

Post a Comment

0 Comments