ಸರ್ವೋದಯ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ

ಜಾಹೀರಾತು/Advertisment
ಜಾಹೀರಾತು/Advertisment

 


ಮಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ ವತಿಯಿಂದ ನಡೆದ 20 ಓವರ್ ಗಳ ಕ್ರಿಕೆಟ್ ಪಂದ್ಯಾಟವು ಸ್ವರಾಜ್ ಮೈದಾನದಲ್ಲಿ ನಡೆಯಿತು.

 ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಪುರಸಭಾಧ್ಯಕ್ಷ ಪ್ರಸಾದ್  ಕುಮಾರ್ ಬಹುಮಾನ ವಿತರಿಸಿದರು.

ಈ ಪಂದ್ಯಾಟದಲ್ಲಿ ಮೊದಲನೇ ಬಹುಮಾನವನ್ನು ಎಫ್.ಸಿ.ಟಿ ಪುತ್ತಿಗೆ ತಂಡವು, ಎರಡನೆಯ ಬಹುಮಾನವನ್ನು ಮಾರಿಗುಡಿ ಫ್ರೆಂಡ್ಸ್ ಮೂಡುಬಿದರೆ ತಂಡವು ಪಡೆದುಕೊಂಡಿತು. 

ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾಜೇಶ್  ನಾಯ್ಕ್,  ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಪ್ರಮುಖರಾದ ಹರೀಶ್, ಸತೀಶ್, ರಾಜೇಶ್ ಪಿ.ಎಸ್, ಗುರು, ನವೀನ್, ಗಣೇಶ್, ಸುರೇಶ್, ಮನೋಜ್, ದೇಜಪ್ಪ, ಹಾಗೂ ಕ್ರೀಡಾಪಟುಗಳು ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments