ಮಡುಬಿದಿರೆ: ಸರ್ವೋದಯ ಫ್ರೆಂಡ್ಸ್ ಮೂಡುಬಿದಿರೆ ವತಿಯಿಂದ ನಡೆದ 20 ಓವರ್ ಗಳ ಕ್ರಿಕೆಟ್ ಪಂದ್ಯಾಟವು ಸ್ವರಾಜ್ ಮೈದಾನದಲ್ಲಿ ನಡೆಯಿತು.
ಪಂದ್ಯದಲ್ಲಿ ವಿಜೇತರಾದ ತಂಡಗಳಿಗೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಬಹುಮಾನ ವಿತರಿಸಿದರು.
ಈ ಪಂದ್ಯಾಟದಲ್ಲಿ ಮೊದಲನೇ ಬಹುಮಾನವನ್ನು ಎಫ್.ಸಿ.ಟಿ ಪುತ್ತಿಗೆ ತಂಡವು, ಎರಡನೆಯ ಬಹುಮಾನವನ್ನು ಮಾರಿಗುಡಿ ಫ್ರೆಂಡ್ಸ್ ಮೂಡುಬಿದರೆ ತಂಡವು ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ರಾಜೇಶ್ ನಾಯ್ಕ್, ಕ್ರಿಕೆಟ್ ಯೂನಿಯನ್ ಅಧ್ಯಕ್ಷ ಅಶ್ರಫ್ ವಾಲ್ಪಾಡಿ, ಪ್ರಮುಖರಾದ ಹರೀಶ್, ಸತೀಶ್, ರಾಜೇಶ್ ಪಿ.ಎಸ್, ಗುರು, ನವೀನ್, ಗಣೇಶ್, ಸುರೇಶ್, ಮನೋಜ್, ದೇಜಪ್ಪ, ಹಾಗೂ ಕ್ರೀಡಾಪಟುಗಳು ಮೊದಲಾದವರು ಉಪಸ್ಥಿತರಿದ್ದರು.
0 Comments