ಶ್ರೀ ಕ್ಷೇತ್ರ ಇಟಲಕ್ಕೆ ಶ್ರೀ ಡಿ ಸುರೇಂದ್ರ ಕುಮಾರ್ ಭೇಟಿ : ಧರ್ಮೋತ್ಥಾನ ಟ್ರಸ್ಟ್ ಕಾರ್ಮಿಕರ ಜೊತೆಗೆ ಮಾತುಕತೆ

ಜಾಹೀರಾತು/Advertisment
ಜಾಹೀರಾತು/Advertisment


 ಮೂಡುಬಿದಿರೆ:ದರೆಗುಡ್ಡೆ ವ್ಯಾಪ್ತಿಯ ಪಣಪಿಲ ಅರಮನೆಗೆ ಸಂಬಂಧಪಟ್ಟ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಇಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಸಹೋದರ   ಧರ್ಮೋತ್ಥಾನ ಟ್ರಸ್ಟ್ ನ ಮುಖ್ಯಸ್ಥರಾದ  ಶ್ರೀ ಡಿ ಸುರೇಂದ್ರ ಕುಮಾರ್ ಮತ್ತು ಅವರ ಧರ್ಮಪತ್ನಿ ಕ್ಷೇತ್ರಕ್ಕೆ ಭೇಟಿ ನೀಡಿದರು. 


ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯಗಳು ಮತ್ತು ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. 


ಮಾತ್ರವಲ್ಲದೆ ಇಲ್ಲಿ ಕಾಮಗಾರಿ ನಡೆಸುತ್ತಿದ್ದ ಧರ್ಮೋತ್ಥಾನ ಟ್ರಸ್ಟ್ ನ ಕಾರ್ಮಿಕರ ಜೊತೆಗೆ ಮಾತುಕತೆ ನಡೆಸಿದರು. ಧರ್ಮಸ್ಥಳದ ವತಿಯಿಂದ ದೇಗುಲದ ಅಭಿವೃದ್ಧಿಗೆ ಸರ್ವರೀತಿಯಲ್ಲೂ ಸಹಕಾರ ನೀಡಲಿದ್ದೇವೆ. ಈ ದೇವಸ್ಥಾನವನ್ನು ಕೇವಲ ಧರ್ಮೋತ್ಥಾನ ಟ್ರಸ್ಟ್ ಮಾತ್ರವಲ್ಲದೆ ಸ್ವತಃ ಪೂಜ್ಯ ಹೆಗ್ಗಡೆಯವರು ಮತ್ತು ಅತ್ತಿಗೆ ಯವರಾದ ಹೇಮಾವತಿ ಅಮ್ಮನವರು ಮಾನಿಟರ್ ಮಾಡುತ್ತಿದ್ದು ಇದಕ್ಕೆ ಮತ್ತಷ್ಟು ಹೆಚ್ಚಿನ ಒತ್ತು ನೀಡಲಿದ್ದೇವೆ ಎಂದು ಶ್ರೀ ಸುರೇಂದ್ರ ಕುಮಾರ್ ಹೇಳಿದರು . 


ಈ ಸಂದರ್ಭದಲ್ಲಿ ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ ವಿಮಲ್ ಕುಮಾರ್ ಶೆಟ್ಟಿ , ಕಾರ್ಯಾಧ್ಯಕ್ಷರಾದ ಸುಕೇಶ್ ಶೆಟ್ಟಿ, ಮಾಗಣೆ ಅಸ್ರಣ್ಣರಾದ ನಾಗರಾಜ ಭಟ್, ಭರತ್ ಜೈನ್, ಕೋಶಾಧಿಕಾರಿ ಸುಧೀಶ್ ಜೈನ್, ದಿನೇಶ್ ಆನಡ್ಕ, ಯುವರಾಜ್ ಜೈನ್ ಹಾಗೂ ಇತರೆ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments