ಕೇಂದ್ರ ಸರಕಾರದಿಂದ ರಾಜ್ಯ ಸಭೆಗೆ ನಾಮನಿರ್ದೇಶನಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಜುಲೈ 17ರಂದು ಕಟೀಲು ಶ್ರೀ ಗೋಪಾಲಕೃಷ್ಣ ಅಸ್ರಣ್ಣ ಟ್ರಸ್ಟ್ ವತಿಯಿಂದ ಲಕ್ಸ್ಮಿ ನಾರಾಯಣ ಅಸ್ರಣ್ಣ ಅವರು ಕಟೀಲು ಶ್ರೀ ಭ್ರಮರಾಂಬೆಯ ಪ್ರಸಾದ ಸಹಿತ ಶಾಲು ಹೊದಿಸಿ ಮಾಲಾರ್ಪಣೆಗೈದು, ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದ ಟ್ರಸ್ಟ್ ನ ಲಕ್ಸ್ಮಿನಾರಾಯಣ ಅಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಮೂಡಬಿದ್ರಿಯ ಉದ್ಯಮಿ ಶ್ರೀ ಧನಲಕ್ಸ್ಮಿ ಕ್ಯಾಶೂಸ್ನ ಕೆ. ಶ್ರೀಪತಿ ಭಟ್, ಕಿನ್ನಿಗೋಳಿ ಯುಗಪುರುಷ ಸಂಪಾದಕ ಭುವನಾಭಿರಾಮ ಉಡುಪ ಮೊದಲಾದವರು ಉಪಸ್ಥಿತರಿದ್ದು ಡಾ. ಹೆಗ್ಗಡೆಯವರಿಗೆ ಮಾಲಾರ್ಪಣೆಗೈದರು.
0 Comments