ಮೂಡುಬಿದಿರೆ ವ್ಯಾಪ್ತಿಯಲ್ಲಿ 4.15 ಕೋಟಿ ಮೌಲ್ಯದ ರಕ್ತಚಂದನ ಮರದ ದಿಮ್ಮಿಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ  ಮಂಗಳೂರು ತಾಲೂಕು ಕಿಲ್ಪಾಡಿ ಗ್ರಾಮದ ಕೆಂಚನಕೆರೆ  ವ್ಯಾಪ್ತಿಯ ಈಚರ್ ವಾಹನದಲ್ಲಿ 8308 ಕೆಜಿ ತೂಕವುಳ್ಳ ರಕ್ತಚಂದನ ಮರದ 316 ದಿಮ್ಮಿಗಳನ್ನು ಹುಲ್ಲಿನ ಚೀಲದಲ್ಲಿ ಮುಚ್ಚಿ ಸಾಗಿಸುತ್ತಿದ್ದ ಲಾರಿ ಹಾಗೂ ಮಹೇಂದ್ರ ಮೊರೇಜೋ ವಾಹನವನ್ನು ಮಂಗಳೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪ್ರಾದೇಶಿಕ ವಲಯ ಮೂಡಬಿದ್ರೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಾಹನವನ್ನು ಜಪ್ತಿಪಡಿಸಿ ಅರಣ್ಯ ಮೊಕದ್ದಮೆ ದಾಖಲು ಮಾಡಿರುವ ಘಟನೆ ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ. 

ಈ ಪ್ರಕರಣದಲ್ಲಿ 07 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದೆ. 

ಒಬ್ಬ ಆರೋಪಿಯು ತಲೆಮರೆಸಿಕೊಂಡಿದ್ದು , ತಂಡವು

ಹೆಚ್ಚಿನ ತನಿಖೆಯನ್ನು ಮುಂದುವರಿಸಿದೆ.

ಈ ಗುಂಪಿನ ಪ್ರಮುಖ ಆರೋಪಿ ಅನಿಲ್ ಕುಮಾರ್,ಹಾಗೂ  ಅಲಾಡಿ ರಾಜೇಶ್ ರೆಡ್ಡಿ, ಸುಭಾಷ್ ಎಂ, ಪಾಲರಾಜ್. ಎಸ್, ಶಾಮೀರ್. ಎಸ್, ಕುಂಜ್ಞಿ ಮಹಮದ್,  ದಿನೇಶ್ ಕುಮಾರ್ ಕೆ ಈ  ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. 

ಪ್ರಕರಣವನ್ನು  ಪಿ.ಶ್ರೀಧರ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಅರಣ್ಯ ಸಂಚಾರಿ ದಳ ಮಂಗಳೂರು ಇವರ ಮಾರ್ಗದರ್ಶನದಂತೆ ಮಂಗಳೂರು ಅರಣ್ಯಸಂಚಾರಿ ದಳದ ವಲಯದ ಅರಣ್ಯ ಅಧಿಕಾರಿಗಳಾದ  ಚಿದಾನಂದಪ್ಪ, ಸಂಪತ್‌ ಪಟೇಲ್ ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳಾದ ಕರುಣಾಕರ.ಜೆ.ಆಚಾರ್ಯ,  ಪ್ರದೀಪ ಬಿ.ಎಸ್, ಕಾಂತರಾಜ್ ಬಿ.ಎ. ,ವಿಕಾಸ್ ಶೆಟ್ಟಿ.ಕೆ,ಸಂತೋಷ್, ರಾಕೇಶ್, ಕೃಷ್ಣಪ್ಪ.ಜಿ, ನವೀನ ಕುಮಾರ್, ಮತ್ತು ಬಂಟ್ವಾಳ ವಲಯದ ಉಪ ವಲಯ ಅರಣ್ಯ ಅಧಿಕಾರಿಗಳಾದ  ಪ್ರೀತಮ್‌ ಮತ್ತು ಅರಣ್ಯ ರಕ್ಷಕ ಜಿತೇಶ್ ಪುತ್ರನ್ ಹಾಗೂ ಮೂಡಬಿದ್ರೆ ಪ್ರಾದೇಶಿಕ ವಲಯದ ವಲಯ ಅರಣ್ಯ ಅಧಿಕಾರಿ ಹೇಮಗಿರಿ ಅಂಗಡಿ ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳಾದ ಮಂಜುನಾಥ ಗಾಣಿಗ ಮತ್ತು ಅಶ್ವಿತ್‌ ಗಟ್ಟಿ  ಯಶಸ್ವಿ    ಕಾರ್ಯಾಚರಣೆಯನ್ನು   ನಡೆಸಿದ್ದಾರೆ. 

ಪ್ರಕರಣವನ್ನು  ಪಿ.ಶ್ರೀಧರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಇವರ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿಯಾದ  ಚಿದಾನಂದಪ್ಪ ಇವರು ಹೆಚ್ಚಿನ ತನಿಖೆಯನ್ನು ಕೈಗೊಂಡಿರುತ್ತಾರೆ. ಜಪ್ತಿ ಪಡಿಸಲಾದ ರಕ್ತಚಂದನದ ಅಂದಾಜು ಮೌಲ್ಯ ಸುಮಾರು 4.15 ಕೋಟಿ ಮೌಲ್ಯದ್ದಾಗಿರುತ್ತದೆ. ಈ ಕಾರ್ಯಾಚರಣೆಯ ಬಗ್ಗೆ  ಸೀಮಾ ಗರ್ಗ್ ಭಾ.ಅ.ಸೇ, ಅವರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಜಾಗೃತ) ಇವರು ಅರಣ್ಯ ಸಂಚಾರಿ ದಳ ಮಂಗಳೂರಿನ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದ್ದಾರೆ.

Post a Comment

0 Comments