ಯುಪಿಯಲ್ಲಿ ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ ಬಂದ 15 ದಿನಗಳಲ್ಲಿ 50 ಅಪರಾಧಿಗಳು ಶರಣಾಗಿದ್ದಾರೆ

 

ಲಖನೌ: ಇದೇ ಮಾರ್ಚ್ 10 ರಂದು ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂತು. ಹೀಗಾಗಿ ಇಂದಿಗೆ 15 ದಿನಗಳಾಗಿದ್ದು ಸುಮಾರು 50 ಕ್ರಿಮಿನಲ್‌ಗಳು ಶರಣಾಗಿದ್ದಾರೆ.

ಎನ್ ಕೌಂಟರ್ ಭಯದಿಂದ ಶರಣಾದ ಅಪರಾಧಿಗಳು ಕುತ್ತಿಗೆ ಮೇಲೆ ಗೀಚಿದ ಸಂದೇಶದ ಭಿತ್ತಿಪತ್ರಗಳನ್ನು ನೇತುಹಾಕಿ "ನಾನು ಶರಣಾಗುತ್ತಿದ್ದೇನೆ. ದಯವಿಟ್ಟು ಗುಂಡು ಹಾರಿಸಬೇಡಿ". ಎಂದು ಹಲವಾರು ಕ್ರಿಮಿನಲ್‌ಗಳು ರಾಜ್ಯದಾದ್ಯಂತ ಪೊಲೀಸ್ ಠಾಣೆಗಳಿಗೆ ಕಾಲಿಟ್ಟಿದ್ದಾರೆ.

Post a Comment

0 Comments