ಪುರಸಭಾ ವ್ಯಾಪ್ತಿಯ ಚರಂಡಿ, ರಸ್ತೆ ದುರಸ್ಥಿಗೊಳಿಸಲು ಪುರಸಭೆಗೆ ನೇತಾಜಿ ಬ್ರಿಗೇಡ್ ಮನವಿ

ಪುರಸಭಾ ವ್ಯಾಪ್ತಿಯ ಚರಂಡಿ, ರಸ್ತೆ ದುರಸ್ಥಿಗೊಳಿಸಲು ಪುರಸಭೆಗೆ ನೇತಾಜಿ ಬ್ರಿಗೇಡ್ ಮನವಿ

ಮೂಡುಬಿದಿರೆ : ನಗರದ ರಸ್ತೆ, ಸ್ವರಾಜ್ಯ ಮೈದಾನದಿಂದ ಗಾಂಧಿನಗರ ರಸ್ತೆವರೆಗೆ ಚರಂಡಿ ಹಾಗೂ ಹಾಳಾದ ರಸ್ತೆಯನ್ನು ದುರಸ್ಥಿ ಪಡಿಸಬೇಕೆಂದು, ಹಾಗೂ ಘನ ವಾಹನಗಳ ಸಂಚಾರದಿಂದ ಆಗುವ ತೊಂದರೆಗೆ ಪರಿಹಾರವನ್ನು ಕಂಡುಕೊಳ್ಳಬೇಕೆಂದು ಸುಮಾರು ಪ್ರಮುಖ 4.ಅಂಶಗಳನ್ನೊಳಗೊಂಡ ಮನವಿಯನ್ನು ನೇತಾಜಿ ಬ್ರಿಗೇಡ್  ಸಂಘಟನೆಯು ಪುರಸಭೆಯ ಮುಖ್ಯಾಧಿಕಾರಿ ಇಂದು ಎಂ. ಅವರಿಗೆ ಸಲ್ಲಿಸಿತು. 
  ಈ ಸಂಧರ್ಭ ಪುರಸಭಾ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಮಾಜಿ ಸದಸ್ಯ ರಾಜೇಶ್ ನಾಯ್ಕ್, ನೇತಾಜಿ ಬ್ರಿಗೇಡಿನ ಸ್ಥಾಪಕಧ್ಯಕ್ಷ ರಾಹುಲ್ ಕುಲಾಲ್, ಉಪಾಧ್ಯಕ್ಷ ಕುಮಾರ್ ಮಾಸ್ತಿಕಟ್ಟೆ, ಯಶವಂತ್ ಮಾಸ್ತಿಕಟ್ಟೆ, ಅಭಿಷೇಕ್ ಸಾಲಿಯಾನ್, ಶರತ್ ಸ್ವರಾಜ್ಯ ಮೈದಾನ್, ಉಮೇಶ್ ಕೋಟ್ಯಾನ್ ಸಮಗಾರ ಗುಂಡಿ, ನವೀನ್ ಗಾಂಧಿನಗರ. ಉಪಸ್ಥಿತರಿದ್ದರು.

Post a Comment

0 Comments

Advertisement