ಮೂಡುಬಿದಿರೆ: ಒಂಟಿಕಟ್ಟೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಅಯ್ಯಪ್ಪ ಮಂದಿರದಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ 37ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಸೋಮವಾರ ಬಿಡುಗಡೆಗೊಳಿಸಲಾಯಿತು.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಂಟಿಕಟ್ಟೆಯ ಅಧ್ಯಕ್ಷ ರಾಜೇಶ್ ಸುವರ್ಣ, ಸಮಿತಿಯ ಸದಸ್ಯ ಹಾಗೂ ಮೂಡುಬಿದಿರೆ ಪುರಸಭೆಯ ನಿಕಟಪೂರ್ವ ಉಪಾಧ್ಯಕ್ಷ ನಾಗರಾಜ ಪೂಜಾರಿ, ಸಮಿತಿ ಸದಸ್ಯ ರಾಜೇಶ್ (ಬೆನಕ ಆರ್ಟ್ಸ್), ಸಾರ್ವಜನಿಕ ಅಯ್ಯಪ್ಪ ಸೇವಾ ಸಮಿತಿ ಒಂಟಿಕಟ್ಟೆಯ ಪ್ರಕಾಶ್ ಅಂಚನ್, ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ ನಾಗೇಶ್, ಪ್ರಮುಖರಾದ ಮಾಧವ ಕಾಮತ್, ಕೇಶವ, ಕುಮಾರ್, ತಿಲಕ್, ರತೀಶ್, ಮನು ಒಂಟಿಕಟ್ಟೆ, ಪ್ರವೀಶ್ ಸಾಲ್ಯಾನ್ ಉಪಸ್ಥಿತರಿದ್ದರು.

0 Comments