ಬಿ. ಸಿ. ರೋಡ್ ಕೊಲೆ ಆರೋಪಿ ಚೇತನ್ ಫೋಟೋ ಎಡಿಟಿಂಗ್ : ಕಠಿಣ ಕ್ರಮಕ್ಕೆ ಬಿಜೆಪಿ ಯುವ ಮೋಚಾ೯ದಿಂದ ದೂರು
ಮೂಡುಬಿದಿರೆ : ಬಂಟ್ವಾಳ ಬಿ.ಸಿ. ರೋಡ್ ನಲ್ಲಿ ಯುವತಿಯ ಕೊಲೆ ಪ್ರಕರಣದ ಆರೋಪಿ ಚೇತನ್ನ ಫೋಟೋವನ್ನು ದುರುದ್ದೇಶಪೂರ್ವಕವಾಗಿ ಎಡಿಟ್ ಮಾಡಿ (ಮಾರ್ಫಿಂಗ್), ಆತನಿಗೆ ಭಜರಂಗದಳದ ಸಂಘಟನಾತ್ಮಕ ಗುರುತು ನೀಡಿ ಸುಳ್ಳು ಸುದ್ದಿ ಹರಡಿದ ಫೇಸ್ಬುಕ್ ಖಾತೆದಾರ "ಶೈಲಜಾ ಅಮರನಾಥ್" ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಕುರಿತು ಬಿಜೆಪಿ ಮುಲ್ಕಿ ಮೂಡುಬಿದಿರೆ ಯುವ ಮೋರ್ಚಾ ಅಧ್ಯಕ್ಷರಾದ ಕುಮಾರ್ ಪ್ರಸಾದ್ ನೇತೃತ್ವದಲ್ಲಿ ಮೂಡಬಿದಿರೆಯ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಲಾಯಿತು.
ಈ ಸಂದಭ೯ದಲ್ಲಿ ಯುವಮೋಚಾ೯ದ ಪದಾಧಿಕಾರಿಗಳು ಉಪಸ್ಥಿತರಿದ್ದರು.



0 Comments