ಮೂಡುಬಿದಿರೆ : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ವಿ.ಸಿ ಅವರ ಮಾರ್ಗದರ್ಶನದಲ್ಲಿ ಶುಕ್ರವಾರ ಶಿರ್ತಾಡಿಯ ಗ್ರಾಮ ಪಂಚಾಯತ್ನಲ್ಲಿ ಹಣಕಾಸು ಸಾಕ್ಷರತಾ ಶಿಬಿರ ನಡೆಯಿತು.
ಬ್ಯಾಂಕ್ ನ ಪ್ರಾದೇಶಿಕ ಮುಖ್ಯಸ್ಥೆ ತೇಜಸ್ವಿನಿ ವಿಸಿ ಮತ್ತು ಆರ್ಎಬಿಡಿ ಇನ್ಚಾರ್ಜ್ ದಿನೇಶ್ ಎಚ್ಕೆ ಸಭೆಯನ್ನುದ್ದೇಶಿಸಿ ಕೆವೈಸಿ, ಆರ್ಇಕೆವೈಸಿ, ಸಿಕೆವೈಸಿ,ಡಿಜಿಟಲ್ ವಂಚನೆಗಳ ತಡೆಗಟ್ಟುವಿಕೆ, ಡೇಟಾ ರಕ್ಷಣೆ,ಹಣಕಾಸು ಉತ್ಪನ್ನಗಳು, ಡಿಜಿಟಲ್ ಬ್ಯಾಂಕಿಂಗ್, ಗ್ರಾಹಕ ರಕ್ಷಣೆ, ಕೆವೈಸಿ ಸಂಬಂಧಿತ ವಂಚನೆಗಳ ವಿರುದ್ಧ ಎಚ್ಚರಿಕೆ,ಹಣವನ್ನು ಲೂಟಿ ಮಾಡುವುದರ ವಿರುದ್ಧ ಎಚ್ಚರಿಕೆ ಬಗ್ಗೆ ಮಾಹಿತಿಯಿತ್ತರು.
ಗ್ರಾಮಪಂಚಾಯತ್ ಪಿಡಿಒ ಆಶಾಲತಾ, ನಿಕಟ ಪೂರ್ವ ಅಧ್ಯಕ್ಷರು ಅಗ್ನೇಸ್ ಡಿಸೋಜಾ ಮತ್ತು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಪ್ರವೀಣ್ ಜೈನ ಆರ್ಥಿಕ ಸಾಕ್ಷರತೆಯ ಬಗ್ಗೆ ಸಭೆಯಲ್ಲಿ ಮಾತನಾಡಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಿರ್ತಾಡಿ ಮುಖ್ಯಸ್ಥರಾದ ಕಾರ್ತಿಕ್, ಸಂಜೀವಿನಿ ಎಂಬಿಕೆ ಪ್ರತಿಭಾ ಉಪಸ್ಥಿತರಿದ್ದರು.
ಗಣೇಶ್ ಬಿ ಅಳಿಯೂರು ಕಾಯ೯ಕ್ರಮ ನಿರೂಪಿಸಿ ವಂದಿಸಿದರು.


0 Comments