ರಾಷ್ಟ್ರಮಟ್ಟದ ನೆಟ್ ಬಾಲ್ ಪಂದ್ಯಾಟ : ವಿಜೇತ ಕನಾ೯ಟಕ ತಂಡದ ಕ್ರೀಡಾಪಟುಗಳ ಸಂಭ್ರಮಾಚರಣೆ ನಡೆಸಿದ ಎಡಪದವಿನ ವಿವೇಕಾನಂದ ಕಾಲೇಜು
ಮೂಡುಬಿದಿರೆ : ಡಿ. 24 ರಿಂದ 29 ರವರೆಗೆ ಪಿಲಿಕುಳದ ಸ್ಕೌಟ್ಸ್-ಗೈಡ್ಸ್ ಭವನದಲ್ಲಿ ನಡೆದ ಯು-19 ರಾಷ್ಟ್ರ ಮಟ್ಟದ ನೆಟ್ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ವಿಜೇತರಾಗಿರುವ ಕ್ರೀಡಾಪಟುಗಳನ್ನು ಎಡಪದವು ಸ್ವಾಮಿ ವಿವೇಕಾನಂದ ಕಾಲೇಜು ವತಿಯಿಂದ ಶನಿವಾರ ಹನುಮಾನ್ ಮಂದಿರದ ಬಳಿ ಭವ್ಯ ರೀತಿಯಲ್ಲಿ ಸ್ವಾಗತಿಸಿ ಸಂಭ್ರಮಾಚರಣೆ ನಡೆಸಲಾಯಿತು.
ಕನಾ೯ಕಟ ತಂಡವನ್ನು ಪ್ರತಿನಿಧಿಸಿರುವ ಸಾಧಕ ಕ್ರೀಡಾಪಟುಗಳಾದ ತಂಡದ ನಾಯಕಿ ಎಡಪದವು ಕಾಲೇಜಿನ ನಿಕಿತಾ, ಹಷಿ೯ತಾ, ಹೇಮಾ, ಸಂಧ್ಯಾ ಮತ್ತು ದಿವ್ಯಾ ಮೂಡುಬಿದಿರೆ ಜೈನ್ ಕಾಲೇಜಿನ ಶ್ರೀರಕ್ಷಾ, ಸಿಂಚನಾ, ಅನ್ವಿತಾ ಹಾಗೂ ಉಜಿರೆ ಎಸ್ ಡಿಎಂನ ಸುಪ್ರಿಯಾ ಮತ್ತು ದೀಪ್ತಿ, ಅವರನ್ನು ಎಡಪದವು ಹನುಮಾನ್ ಮಂದಿರದ ಬಳಿ ಹೂಹಾರ ಹಾಕಿ ತೆರೆದ ಪಿಕಪ್ ವಾಹನದಲ್ಲಿ ಕಾಲೇಜಿನವರೆಗೆ ಪಟಾಕಿ ಸಿಡಿಸಿ, ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಕರೆತರಲಾಯಿತು.
ನಂತರ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಮತ್ತು ಅವರ ಪೋಷಕರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡಲಾಯಿತು.
ವಿದ್ಯಾರ್ಥಿಗಳ ಈ ಸಾಧನೆಗೆ ಮಾರ್ಗದರ್ಶನ ನೀಡಿದ ನವೀನ್ ಹೆಗ್ಡೆ (ಜೈನ್ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ),ನವೀನ್ ಕೊರೆಯ (ಇತಿಹಾಸ ಉಪನ್ಯಾಸಕ) ಮಾಧವ ವಿ.ಎಸ್ (ರಾಜ್ಯಶಾಸ್ತ್ರ ಉಪನ್ಯಾಸಕ), ಪ್ರಕಾಶ್ ಅಂತರವಳ್ಳಿ (ಆಂಗ್ಲ ಭಾಷಾ ಉಪನ್ಯಾಸಕ),ಅಪರ್ಣಾ (ತಂಡದ ಮ್ಯಾನೇಜರ್ ಹಾಗೂ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ), ಶಾಂತಾರಾಮ ರೈ (ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ) ಅವರನ್ನು ಗೌರವಿಸಲಾಯಿತು.
ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಎನ್. ಪದ್ಮಶೇಖರ್ ಜೈನ್, ಸದಸ್ಯ ನಾರ್ಬಟ್ ಮಥಾಯಸ್, ಹಿರಿಯ ಉಪನ್ಯಾಸಕ ಸುಧಾಕರ್ ಶೆಟ್ಟಿ, ಪ್ರಾಂಶುಪಾಲೆ ಗಾಯತ್ರಿ ಹಾಗೂ ಆಡಳಿತಾಧಿಕಾರಿ ಪ್ರೇಮ್ನಾಥ್ ಶೆಟ್ಟಿ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ವಾಸು ಕೆ. ಕಾರ್ಯಕ್ರಮ ನಿರೂಪಿಸಿದರು, ಪ್ರಾಂಶುಪಾಲೆ ಗಾಯತ್ರಿ ಸ್ವಾಗತಿಸಿದರು ಮತ್ತು ಶಿಕ್ಷಕ ಕೃಷ್ಣ ಸುಭಾಸ್ ಗುಳಕಣ್ಣವರ್ ವಂದಿಸಿದರು.





0 Comments