ಕೋಟೆಬಾಗಿಲು ದೇವಸ್ಥಾನದಲ್ಲಿ ಹನುಮ ಜಯಂತಿ
ಮೂಡುಬಿದಿರೆ:ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದಲ್ಲಿ ಶನಿವಾರ ಎಡಪದವು ವೆಂಕಟೇಶ ತಂತ್ರಿಗಳ ನೇತ್ರತ್ವದಲ್ಲಿ ಹನುಮ ಜಯಂತಿಯನ್ನು ಆಚರಿಸಾಯಿತು
ಬೆಳಿಗ್ಗೆ 8 ಗಂಟೆಗೆಚಸ್ವಸ್ತಿ ವಾಚನ, ಗಣಪತಿ ಹೋಮ, ಕಲಶಾಭಿಷೇಕ, ಪವಮಾನವಹೋಮ, ದುರ್ಗಾ ಹೋಮ ನಡೆಯಿತು. ನಂತರ ಹೆಗ್ಗಡೆ ಮಹಿಳಾ ಸದಸ್ಯರಿಂದ ಭಜನೆ ಸಂಕೀರ್ತನೆ ನಡೆಯಿತು. ವಿಶೇಷ ಸಿಯಾಳಾಭಿಷೇಕ ನಂತರ ಮಧ್ಯಾಹ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಪ್ರಸಾದ್ ಭಟ್ ಅವರು ಮಹಾಪೂಜೆ ನೆರವೇರಿಸಿದರು.
ಮಧ್ಯಾಹ್ನ 2 ಗಂಟೆಗೆ ಹೆಗ್ಗಡೆ ಸಮಾಜದ ಕಲಾವಿದರ ಕೂಡುವಿಕೆಯಲ್ಲಿ 'ಶ್ರೀರಾಮ ದರ್ಶನ' ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ರಂಗಪೂಜೆ ಸೇವೆ ನಡೆಯಿತು.ದೇವಸ್ಥಾನದ ಆಡಳಿತ ಮೊಕ್ತೇಸರ ಉದಯ ಕುಮಾರ್ ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಢ, ಕಾರ್ಯದರ್ಶಿ ವೈಷ್ಣವ್ ಹೆಗ್ಡೆ ದೇವಸ್ಥಾನದ ಮೊಕ್ತೇಸರರು, ಹೆಗ್ಗಡೆ ಸಂಘದ ಪದಾಧಿಕಾರಿಗಳು , ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಂದುಗಳು ಪಾಲ್ಗೊಂಡರು.
0 Comments