ಜಿಲ್ಲಾ ಮಟ್ಟದ ಭಜನಾ ಷರಿಷತ್ ಸಭೆ

ಜಾಹೀರಾತು/Advertisment
ಜಾಹೀರಾತು/Advertisment

 ಜಿಲ್ಲಾ ಮಟ್ಟದ ಭಜನಾ ಷರಿಷತ್ ಸಭೆ 


  ಮೂಡುಬಿದಿರೆ: ಶ್ರೀ ಕ್ಷೇತ್ರ ಧಮ೯ಸ್ಥಳ ಮಂಜುನಾಥೇಶ್ವರ ಪ್ರಾದೇಶಿಕ ಭಜನಾ ಪರಿಷತ್ ಇದರ ವತಿಯಿಂದ ಜಿಲ್ಲಾ ಮಟ್ಟದ ಭಜನಾ ಪರಿಷತ್ ಸಭೆಯು ಬಂಟ್ವಾಳ ಯೋಜನಾ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆಯಿತು.


ಭಜನಾ ಪರಿಷತ್ತಿನ  ರಾಜ್ಯಾಧ್ಯಕ್ಷ  ಪಿ. ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಜನಾ ಮಂಡಳಿ ಹಾಗೂ ಮಂದಿರಗಳ ರಿಜಿಸ್ಟ್ರೇಷನ್ ಮುಂತಾದ ದಾಖಲಾತಿಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯವಾಗಿದ್ದು ಅದಕ್ಕೆ ಬೇಕಾದ ಮಾಹಿತಿಗಳನ್ನು ನೀಡಿದರು. ಭಜನಾ ಪರಿಷತ್ತು ನಗರ ಭಜನೆ,ಮನೆ ಮನ ಭಜನೆ, ಸಂಧ್ಯಾ ಭಜನೆ ಮುಖಾಂತರವಾಗಿ ನಿರಂತರ ಚಟುವಟಿಕೆಗಳಿಂದ ಕೂಡಿರಬೇಕು ಎಂದರು.

ರಾಜ್ಯ ಭಜನಾ ಪರಿಷತ್ತಿನ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಅವರು ಮಾಹಿತಿ  ನೀಡುತ್ತಾ, ಭಜನಾ ಮಂಡಳಿಗಳ ಹಾಗೂ ಮಂದಿರಗಳ ಪ್ರಾಥಮಿಕ ಅವಶ್ಯಕತೆಗಳಿಗೆ ಅನುಗುಣವಾಗಿ ವಲಯ ಭಜನಾ ಪರಿಷತ್ತ್ ಸಂಯೋಜಕರು ಸ್ಪಂದಿಸುವಂತೆ ಕರೆ ನೀಡಿದರು.

ಶ್ರೀ ಕ್ಷೇತ್ರದಿಂದ ಹಾಗೂ ಸರಕಾರದಿಂದ ಸಿಗುವ ಅನುದಾನಗಳ ಒದಗಣೆಗೆ  ಪೂರಕವಾಗುವಂತೆ ಹಾಗೂ ಭಜನಾ ಮಂಡಳಿಗಳ ಸದೃಢತೆಗೆ ಬೇಕಾಗಿ ಸಮನ್ವಯಾಧಿಕಾರಿಗಳನ್ನು ನೇಮಕ ಮಾಡಿದ್ದು ಭಜನಾ ಪರಿಷತ್ ಪದಾಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ತಿಳಿಸಿದರು. ಪೂಜ್ಯರ ಆಶಯದಂತೆ ಭಜನಾ ತರಬೇತಿ  ಕಮ್ಮಟದ ಮುಖಾಂತರ ಪ್ರತಿ ವರ್ಷ ನೂರಾರು ಮಂದಿ. ತರಬೇತಿ ಪಡೆದುಕೊಳ್ಳುತ್ತಿದ್ದು ಗ್ರಾಮ ಮಟ್ಟದಲ್ಲಿ ಭಜನಾ ಮಂಡಳಿಗಳನ್ನು ಕಟ್ಟಿ ಬೆಳೆಸುತ್ತಿದ್ದಾರೆ ಎಂದರು.

 ಮಂಗಳೂರು,ಮೂಡುಬಿದಿರೆ, ಕಡಬ,ಕಾಸರಗೋಡು, ಮಂಜೇಶ್ವರ, ಪುತ್ತೂರು, ವಿಟ್ಲ, ಬಂಟ್ವಾಳ, ಸುಳ್ಯ, ಬೆಳ್ತಂಗಡಿ  ತಾಲೂಕಿನ ಅಧ್ಯಕ್ಷರುಗಳು ತಮ್ಮ ತಾಲೂಕಿನ ಪರಿಷತ್ ಸಾಧನೆಯ ವರದಿ ಹಾಗೂ ಅನಿಸಿಕೆಗಳನ್ನು ತಿಳಿಸಿದರು.

ಆರಂಭದಿಂದಲೂ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ನ ನೆರಳಡಿಯಲ್ಲೇ ನಾವು ಕಲಿತು ಬೆಳೆದವರು, ಹಾಗಾಗಿ ಭಜನಾ ಕ್ಷೇತ್ರದ ಒಗ್ಗಟ್ಟಿಗಾಗಿ ಶ್ರಮಿಸುವ ಸಂದರ್ಭದಲ್ಲಿ ವಿಘ್ನಸಂತೋಷಿಗಳಿಗೆ ಬೇಕಾಗಿ ಹಿಂಜರಿಯ ಬೇಕಾಗಿಲ್ಲ ಪೂಜ್ಯರ ಅನುಗ್ರಹದಂತೆ ಭಜನಾ ಪರಿಷತ್ತನ್ನ ಪೋಷಿಸುವುದೇ ನಮ್ಮ ಜವಾಬ್ದಾರಿ ಎಂಬ ಒಕ್ಕೊರೊಲ ಧ್ವನಿಯನ್ನು ಪ್ರಸ್ತುತಪಡಿಸಿದರು. 


ಜಿಲ್ಲಾ ನಿರ್ದೇಶಕರಾದ  ಮಹಾಬಲ ಕುಲಾಲ್ ಅವರು ಮಾತನಾಡಿ ಹಿಂದೂ ಸಮಾಜವನ್ನು ಒಂದೇ ಸೂರಿನಡಿ ಸೇರಿಸಲು ಹಾಗೂ ಸನಾತನ ಪರಂಪರೆಯ ನಂಬಿಕೆ ಉಳಿಸಿ ಬೆಳೆಸಲು ಮಾತ್ರವಲ್ಲದೆ ದೇವರನ್ನು ಅತ್ಯಂತ ಸಮೀಪದಲ್ಲಿ ಕಾಣಲು ಭಜನೆ ಒಂದು ಮಾಧ್ಯಮವಾಗಿದೆ. ಪೂಜ್ಯರ ಕನಸಿನಂತೆ ಭಜನಾ ಪರಿಷತ್ತಿನ ಮುಖಾಂತರವಾಗಿ ನಾಡಿನದ್ಯಂತ ಭಜನಾ ಮಂದಿರ ಹಾಗೂ ಮಂಡಳಿಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ಕಾಣುತ್ತಿದ್ದು ಇದು ಉತ್ತಮ ಬೆಳವಣಿಗೆ ಎಂದರು.


 ರಾಜೇಂದ್ರ ಕುಮಾರ್ ಬಸ್ರೂರು ಉಪಾಧ್ಯಕ್ಷರು ರಾಜ್ಯ ಭಜನಾ ಪರಿಷತ್ ಧರ್ಮಸ್ಥಳ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು. ದಿನೇಶ್ ಮಾಮೇಶ್ವರ ನಿಕಟ ಪೂರ್ವ ಅಧ್ಯಕ್ಷರು ಬಂಟ್ವಾಳ ಉಪಸ್ತಿತರಿದ್ದರು.


ಬಂಟ್ವಾಳ ತಾಲೂಕು ಯೋಜನಾಧಿಕಾರಿಗಳಾದ ಶ್ರೀ ಜಯನಂದ ರವರು ಸ್ವಾಗತಿಸಿದರು. ಶಶಿಕಲಾ ಕೊಯ್ಲ ಅವರು ಪ್ರಾರ್ಥನೆಯನ್ನು ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಭಜನಾ ಪರಿಷತ್ ಸಮನ್ವಯಾಧಿಕಾರಿಗಳಾದ ಸಂತೋಷ್ ಪಿ ಅಳಿಯೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Post a Comment

0 Comments