ಸಾಯಿ ಮಾನಾ೯ಡ್ ಟ್ರೋಫಿ-2025 *20 ಸೇವಾ ಸಂಸ್ಥೆಗಳಿಗೆ ಗೌರವಾಪ೯ಣೆ, 5 ಬಡ ಕುಟುಂಬಗಳಿಗೆ ಚೆಕ್ ವಿತರಣೆ

 ಸಾಯಿ ಮಾನಾ೯ಡ್ ಟ್ರೋಫಿ-2025

*20 ಸೇವಾ ಸಂಸ್ಥೆಗಳಿಗೆ ಗೌರವಾಪ೯ಣೆ, 5 ಬಡ ಕುಟುಂಬಗಳಿಗೆ ಚೆಕ್ ವಿತರಣೆ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ವತಿಯಿಂದ ನಡೆದ 

ಸಾಯಿ ಮಾರ್ನಾಡ್ ಟ್ರೋಫಿ -2025 ರ ಸಮಾರೋಪ ಸಮಾರಂಭದಲ್ಲಿ 5 ಬಡ ಕುಟುಂಬಗಳಿಗೆ ತಲಾ 10,000ದಂತೆ 50,000ದ ಚೆಕ್ ನ್ನು ವಿತರಿಸಲಾಯಿತು ಮತ್ತು 20 ಸೇವಾ ಸಂಸ್ಥೆಗಳಿಗೆ ಗೌರವಾಪ೯ಣೆ ಮಾಡಲಾಯಿತು.

2ದಿನದ ಕ್ರಿಕೆಟ್ ಪಂದ್ಯಾಟ ಕ್ಕೆ ಅಕ್ಕಿ ವ್ಯವಸ್ಥೆ ಹಾಗೂ 2ದಿನದ ಪಲ್ಯ, ಚಟ್ನಿ ಮಾಡಿಕೊಟ್ಟ ರತ್ನಾಕರ್ ಹೆಗ್ಡೆ ಅವರನ್ನು,ವೈಭವ ನ್ಯೂಸ್ ನ ಸಂಪಾದಕರಿಗೆ, ಸನ್ಮಾನ 2ದಿನದ ಅನ್ನವನ್ನು ಬೇಯಿಸುವ ಕೆಲಸ ಮಾಡಿದ ರತ್ನ ವರ್ಮಾ ಜೈನ್ ಅವರನ್ನು,ಸಾಯಿ ಸೇವಾ ಸಂಘದ ವಿವಿಧ ಕ್ಷೇತ್ರ ಗಳಲ್ಲಿ ಸೇವೆ ಗೈಯುತ್ತಿರುವ ಸುಜಲ್ ಪೂಜಾರಿ ಮಾರ್ನಾಡ್, ಪ್ರಜ್ವಲ್ ಪೂಜಾರಿ ಮಾರ್ನಾಡ್, ರಾಜೇಶ್ ಪುತ್ರನ್,ಅನುಷ್ ಪೂಜಾರಿ ಮಾರ್ನಾಡ್, ಪ್ರವೀಣ್ ಪೂಜಾರಿ ಸಂಕದ ಬಳಿ, ಸಚಿನ್ ಆಚಾರ್ಯ, ಪ್ರಶಾಂತ್ ಸುಭಾಸ್ ನಗರ ಅವರನ್ನು ಗುರುತಿಸಿ ಗೌರವಿಸಲಾಯಿತು.


ಸಂಘ ದ ಅಧ್ಯಕ್ಷ ಯತೀಶ್ ಅಂಚನ್ ಮಾರ್ನಾಡ್, ಕಾರ್ಯದರ್ಶಿ ಸಂತೋಷ್ ಆರ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ರಂಜಿತ್ ಪೂಜಾರಿ ಪಂಚಶಕ್ತಿ,  ಪಡುಮಾರ್ನಾಡ್  ಗ್ರಾ. ಪಂ. ಅಧ್ಯಕ್ಷ ವಾಸುದೇವ ಭಟ್,  ದೇವರಾಜ್ ಪೊಸಲಾಯಿ, ರಮೇಶ್ ಪಿ. ಶೆಟ್ಟಿ ಪನರೊಟ್ಟು, ಸೂರಜ್ ಜೈನ್ ಮಾರ್ನಾಡ್, ಪ್ರಶಾಂತ್ ಮತ್ಲ್ ಮಾರ್, ಪುರಸಭೆಯ ಸದಸ್ಯ ರಾಜೇಶ್ ನಾಯ್ಕ್ , ಜಯ ಬಿ. ಟೀಚರ್, ಜನಾರ್ದನ ರಾವ್ ಪಾಡಿಮನೆ, ಸಂದೀಪ್ ಕೆಲ್ಲಪುತ್ತಿಗೆ,ವೈಷ್ಣವ್ ಹೆಗ್ಡೆ ಯುವಕ ಮಂಡಲ ಅಧ್ಯಕ್ಷರು, ಸಾಯಿ ಮಾರ್ನಾಡ್ ಸೇವಾ ಸಂಘ ದ ಅಧ್ಯಕ್ಷರು &ಕಾರ್ಯದರ್ಶಿ, ನವೀನ್ ಹೆಗ್ಡೆ ಮತ್ತಿತರರು  ಉಪಸ್ಥಿತರಿದ್ದರು.ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 ಪ್ರಶಸ್ತಿ : ಸರ್ವೋದಯ ಕಲ್ಲಮುಂಡ್ಕೂರು -ಪ್ರಥಮ ಹಾಗೂಎನ್. ಎಫ್. ಸಿ. ಕಟೀಲೇಶ್ವರಿ ಮೂಡುಬಿದಿರೆ ದ್ವಿತೀಯ  ಪ್ರಶಸ್ತಿಯನ್ನು ಪಡೆದುಕೊಂಡಿತು.

Post a Comment

0 Comments

Advertisement