ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಆಹಾರೋತ್ಸವ - ೨೦೨೪

ಜಾಹೀರಾತು/Advertisment
ಜಾಹೀರಾತು/Advertisment

 ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಆಹಾರೋತ್ಸವ - ೨೦೨೪

ಮೂಡುಬಿದಿರೆ: ಅಡುಗೆ ಮಾಡುವುದು ಒಂದು ಕಲೆ. ಇದು ವ್ಯಕ್ತಿತ್ವ ನರ‍್ಮಾಣದಲ್ಲಿ ಮಹತ್ತರ ಪಾತ್ರ ನಿರ್ವಹಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ನಾಯಕತ್ವ ಗುಣ ಸಹಬಾಳ್ವೆ, ಆರ್ಥಿಕ ಕೌಶಲ್ಯ, ಸಮಯಪರಿಪಾಲನೆಯ ಗುಣ ವೃದ್ಧಿಗೊಳ್ಳುತ್ತದೆ ಎಂದು ಎಕ್ಸಲೆಂಟ್ ಸಂಸ್ಥೆಯ ಕಾರ‍್ಯದರ್ಶಿ ರಶ್ಮಿತಾ  ಜೈನ್ ಹೇಳಿದರು.

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಕಾಮರ್ಸ್ ಎಸೋಷಿಯೇಷನ್ ಸಹಭಾಗಿತ್ವದಲ್ಲಿ ನಡೆದ ಆಹಾರೋತ್ಸವ – ೨೦೨೪ ಉದ್ಘಾಟಿಸಿ ಮಾತಾಡಿದರು. ಮುಖ್ಯ ತೀರ್ಪುಗಾರ ಉದ್ಯಮಿ   ಪೃಥ್ವಿ ಜೈನ್ ಪ್ಲಾಸ್ಟಿಕ್ ರಹಿತ ಆಹಾರ ತಯಾರಿ, ಆರೋಗ್ಯಕ್ಕೆ ಪೂರಕವಾದ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ವಿದ್ಯಾರ್ಥಿಗಳ ಸೃಜನಶೀಲತೆ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ಅವರಿಗೆ ನೆರವಾಗುತ್ತದೆ ಎಂದರು.


ಆಹಾರೋತ್ಸದಲ್ಲಿ ಭಾಗವಹಿಸಿದ ದ್ವೀತಿಯ ಪಿಯು ಕಾಮರ್ಸ್ ವಿದ್ಯಾರ್ಥಿ ಗೌರವ ಅನಿಸಿಕೆ ಹಂಚಿಕೊಂಡು ಇದು ನಮಗೆ ಹೊಸ ಅನುಭವ  ನಿಗದಿತ ಸಮಯದೊಳಗೆ ವಿವಿಧ ತಿಂಡಿ ತಿನಸುಗಳನ್ನು  ಸಿದ್ಧಪಡಿಸುವುದು ನಿಜಕ್ಕೂ ಒಂದು ಸವಾಲು, ಇದರಿಂದ ಕುಟುಂಬ ನರ‍್ವಹಣೆಯಲ್ಲಿ ಅಮ್ಮನ ಪಾತ್ರ ಏನು ಎಂಬುವುದು ಮನವರಿಕೆಯಾಯಿತು ಎಂದು  ತಿಳಿಸಿದರು.

 ತೀರ್ಪುಗಾರರಾದ ಶೈಲಶ್ರೀ  ಅಮೃತ್ ಪ್ರಭು, ಪ್ರಣಮ್ ಜೈನ್,  ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. 


 ಲಿಖಿತಾ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ಪ್ರತಿಜ್ಞಾ ಜೈನ್ ನಿರೂಪಿಸಿದರು.

Post a Comment

0 Comments