ಮೂಡುಬಿದಿರೆ ತಾಲೂಕಿನಲ್ಲಿ ಮಳೆಯ ಅರ್ಭಟ : ಎರಡು ಮನೆಗಳಿಗೆ ಹಾನಿ
ಮೂಡುಬಿದಿರೆ: ತಾಲೂಕಿನಲ್ಲಿ ಸುರಿದ ಮಳೆಯ ಆರ್ಭಟದಿಂದಾಗಿ ಎರಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಮನೆಗಳು ಹಾನಿಗೊಳಗಾಗಿವೆ.
ವಾಲ್ಪಾಡಿ ಗ್ರಾ.ಪಂಚಾಯತ್ ವ್ಯಾಪ್ತಿಯ ಪಣಪಿಲದ ವೇದಾವತಿ ಆನಂದ್ ಅವರ ಮನೆಯ ಅಡುಗೆ ಮನೆ ಕುಸಿದು ಬಿದ್ದಿದೆ.
ಹೊಸಬೆಟ್ಟು ಗ್ರಾ.ಪಂ.ವ್ಯಾಪ್ತಿಯ ಸುಜಾತ ಶ್ರೀಧರ ಆಚಾರ್ಯ ಅವರ ಮನೆ ಭಾಗಶ: ಹಾನಿಗೀಡಾಗಿದೆ.
ಪಿಡಿಓ ಗಳಾದ ಕಿಶೋರ್ ಕುಮಾರ್ ಮತ್ತು ಶೇಖರ್, ಪಂಚಾಯತ್ ಸದಸ್ಯರುಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
0 Comments