ಮೂಡುಬಿದಿರೆ ಪಾರ್ಕಿಂಗ್ ಅವ್ಯವಸ್ಥೆ-ಅಧಿಕಾರಿಗಳ ಸಭೆ
ನಿಯಮವನ್ನು ಪಾಲಿಸಿ, ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಮೃದುವಾಗಿ ವರ್ತಿಸಿ: ಸಂದೇಶ್ ಪಿಜಿ ಎಚ್ಚರಿಕೆ
ಮೂಡುಬಿದಿರೆ : ಮಂಗಳೂರಿನಿಂದ-ಕಾರ್ಕಳಕ್ಕೆ ಸಂಚಾರ ಮಾಡುವ ಎಕ್ಸ್ ಪ್ರೆಕ್ಸ್ ಮತ್ತು ಖಾಸಗಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಸೂಚಿತ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೊಳಿಸಬೇಕು. ನಿಗದಿ ಪಡಿಸಿರುವ ವೇಳಾಪಟ್ಟಿಯಂತೆ ಸಂಚರಿಸಬೇಕು. ಬಸ್ ಚಾಲಕರು ಮತ್ತು ನಿರ್ವಾಹಕರುಗಳು ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ರೌಡಿಸಂ ತೋರಿಸಬೇಡಿ ಬದಲಾಗಿ ಮೃದುವಾಗಿ ವರ್ತಿಸಿ ತಪ್ಪಿದರೆ ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡುವ ಬಸ್ಗಳ ಬಗ್ಗೆ ಸ್ಪಷ್ಟ ಮಾಹಿತಿ, ದಾಖಲೆ ಸಹಿತ ದೂರು ನೀಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲಿಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಎಚ್ಚರಿಸಿದರು.
ಮೂಡುಬಿದಿರೆಯಲ್ಲಿ ಪಾರ್ಕಿಂಗ್ ಅವ್ಯವಸ್ಥೆ, ಖಾಸಗಿ ಬಸ್ಗಳಿಂದಾಗುವ ಸಮಸ್ಯೆಗಳ ಕುರಿತು ಪುರಸಭೆ, ಪೋಲಿಸ್, ಬಸ್ ಮಾಲಕರು ಹಾಗೂ ಬಸ್ಸ್ಟ್ಯಾಂಡ್ ವಾಣಿಜ್ಯ ಸಂಕೀರ್ಣಗಳ ಮಾಲಕರ ಜೊತೆ ಸಮಾಜ ಮಂದಿರದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಬೆಯಲ್ಲಿ ಅವರು ಮಾತನಾಡಿದರು.
ಬಸ್ ಸಂಚಾರಕ್ಕೆ ಸಂಬಂಧಿಸಿದಂತೆ ಬಸ್ ಮಾಲಕರ ಸಂಘದಿಂದ ಕೈಗೊಂಡ ನಿರ್ಣಯಗಳ ಕುರಿತ ಪತ್ರವನ್ನು ಅವರು ಸಭೆಯ ಮುಂದಿಟ್ಟರು.
ಚಾಪೆ ಹಾಕಿಕೊಂಡು ಹೋಗುವ ಬಸ್ ನವರು ಕಂಡು ಬಂದರೆ ತಕ್ಷಣ ಸೀಝ್ ಮಾಡಿ ಕೋಟ್ ೯ಗೆ ಹಾಕಲಾಗುವುದು. ಬಸ್ ಮಾಲಕರು ಈ ಬಗ್ಗೆ ಗಮನ ಹರಿಸುವಂತೆ ಸೂಚಿಸಿದರು.
ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಮಾತನಾಡಿ ಬಸ್ಸ್ಟ್ಯಾಂಡ್ನಲ್ಲಿ ಪಾರ್ಕಿಂಗ್ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು. ಚತುಷ್ಪಕ್ರ, ದ್ವಿಷಕ್ರ ವಾಹನಗಳ ಪಾರ್ಕಿಂಗ್ಗೆ ಮಾರ್ಕ್ ಮಾಡಲಾಗುವುದು. ವಾಣಿಜ್ಯ ಸಂಕೀರ್ಣದ ಹಿಂಭಾಗದಲ್ಲಿ ವ್ಯವಸ್ಥೆ ಸರಿಪಡಿಸಿ ಅಲ್ಲಿಯೂ ದ್ವಿಚಕ್ರ ವಾಹನಗಳ ಪಾರ್ಕಿಂಗ್ಗೆ ಸ್ಥಳಾವಕಾಶ ನೀಡಲಾಗುವುದು. ಮುಖ್ಯ ರಸ್ತೆಯ ಲಭ್ಯವಿರುವ ಸ್ಥಳದಲ್ಲಿಯೂ ಖಾಸಗಿ ವಾಹನಗಳ ಪಾರ್ಕಿಂಗ್ಗೆ ಸ್ಥಳಾವಕಾಶ ಗುರುತಿಸಲಾಗುವುದು ಎಂದರು.
ಉದ್ಯಮಿ ಅಕ್ಷಯ ಕೆ ಜೈನ್ ಮಾತನಾಡಿ ಬಸ್ಸುಗಳು ಇರುವುದು ಸಾರ್ವಜನಿಕರಿಗೆ ಉಪಯೋಗವಾಗಲು. ಆದರೆ ಬಸ್ಸ್ ನವರು ಸಮಯಪಾಲನೆ ಅಂತ ಹೇಳಿ ಬಸ್ ಸ್ಟ್ಯಾಂಡ್ ಗೆ ಬರದೆ ಹೋದರೆ ತೊಂದರೆ ಅನುಭವಿಸುವವರು ಸಾರ್ವಜನಿಕರಲ್ಲವೇ..? ಸಾರ್ವಜನಿಕರಿಗೂ ಟೈಮಿಂಗ್ಸ್ ಬಗ್ಗೆ ಜಾಗೃತಿಯಿದೆ ಎಂಬುದನ್ನು ತಿಳಿದುಕೊಳ್ಳಿ.
ಖಾಸಗಿ ಎಕ್ಸ್ಪ್ರೆಸ್ ಬಸ್ಗಳು ವಿದ್ಯಾಗಿರಿ, ಅಲಂಗಾರು, ಮಹಾವೀರ ಕಾಲೇಜು ಬಳಿಕ ಅತೀ ವೇಗದಿಂದ ಸಂಚರಿಸುತ್ತದೆ. ಶಾಲೆ, ಆಸ್ಪತ್ರೆ ವಠಾರದಲ್ಲಿ ಕರ್ಕಶ ಹಾರ್ನ್ ಬಳಸುತ್ತಾರೆ. ಇದಕ್ಕೆ ನಿಯಂತ್ರಣ ಹೇರಬೇಕು. ಬೆಳ್ಮಣ್ ಮತ್ತಿತರ ಕಡೆ ತೆರಳುವ ಸರ್ವಿಸ್ ಬಸ್ಗಳು ರಸ್ತೆ ಬದಿ ದೀರ್ಘಹೊತ್ತು ನಿಂತು ಇತರ ವಾಹನ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಸಮಸ್ಯೆಯನ್ನು ಗಮನಕ್ಕೆ ತಂದರು. ಬಸ್ ಮಾಲಕರು, ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಉದ್ದಿಮೆದಾರರು ತಮ್ಮ ಅಹವಾಲುಗಳನ್ನು ಮಂಡಿಸಿದರು.
ಪೊಲೀಸ್ ಉಪನಿರೀಕ್ಷಕರಾದ ಸಿದ್ದಪ್ಪ, ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು.
0 Comments