ಅರಣ್ಯ ಇಲಾಖೆ ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ

ಜಾಹೀರಾತು/Advertisment
ಜಾಹೀರಾತು/Advertisment

 ಅರಣ್ಯ ಇಲಾಖೆ ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ


ಮೂಡುಬಿದಿರೆ : ಅರಣ್ಯ ಇಲಾಖೆಯ ಮಂಗಳೂರು ವೃತ್ತ ಮಟ್ಟದ ಅರಣ್ಯ ಕ್ರೀಡಾಕೂಟ ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ  ಶುಕ್ರವಾರ ಜರಗಿತು.


ಸ್ವರಾಜ್ಯ ಮೈದಾನದಲ್ಲಿ  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಉದ್ಘಾಟಿಸಿ ಮಾತನಾಡಿ ಕ್ರೀಡಾಪಟುಗಳಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಮೀಸಲಾತಿ ಇರುವುದು ಸ್ವಾಗತಾರ್ಹ. ಆದರೆ, ಇದರ ಪ್ರಮಾಣವನ್ನು ಏರಿಸಬೇಕಾಗಿದೆ ಎಂದು ಆಳ್ವರು ಅಭಿಪ್ರಾಯಪಟ್ಟರು.


ಅರಣ್ಯ ಇಲಾಖೆಯ ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಕರಿಕಲನ್ ಅಧ್ಯಕ್ಷತೆ ವಹಿಸಿದ್ದರು.


ಭಾರತದ ೨೦೨೩ರ ಅತಿವೇಗದ ಓಟಗಾರ್ತಿ, ಮಂಗಳೂರು ಆದಾಯ ತೆರಿಗೆ ಅಽಕಾರಿ ಸ್ನೇಹಾ ಎಸ್.ಎಸ್. ಕ್ರೀಡಾ ಜ್ಯೋತಿ ಉದ್ಘಾಟಿಸಿದರು. ಉಲ್ಲಾಸ್ ಕ್ರೀಡಾ ಪ್ರತಿಜ್ಞೆ ಸ್ವೀಕರಿಸಿದರು.

ಮೂಡುಬಿದಿರೆ ರೋಟರಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ನಾರಾಯಣ ಪಿ. ಎಂ. ಮುಖ್ಯಅತಿಥಿಯಾಗಿದ್ದರು.

ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧೀಕಾರಿ ಗಣಪತಿ, ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಉದಯ ನಾಯಕ್,ಕರ್ನಾಟಕ ಗೇರು ಅಭಿವೃದ್ದಿ ನಿಗಮದ ವಿಭಾಗೀಯ ವ್ಯವಸ್ಥಾಪಕ ಉದಯ ಜೋಗಿ,  ಕೂಟದ ಆರ್ಥಿಕ ಸಮಿತಿ ಅಧ್ಯಕ್ಷ  ಕುಂದಾಪುರ ಉಪವಿಭಾಗ ಎಸಿಎಫ್ ಕ್ಲಿಫರ್ಡ್ ಲೋಬೋ, ಕ್ರೀಡಾ ಸಮಿತಿ ಆಧ್ಯಕ್ಷ, ಸುಬ್ರಹ್ಮಣ್ಯ ಎಸಿಎಫ್ ಪ್ರವೀಣ ಕುಮಾರ ಶೆಟ್ಟಿ,  ಸಹಕಾರ, ಸಮನ್ವಯ ಸಮಿತಿ ಅಧ್ಯಕ್ಷ , ಪುತ್ತೂರು ಉಪವಿಭಾಗ ಎಸಿಎಫ್ ಸುಬ್ಬಯ್ಯ ನಾಯ್ಕ್, ಅಹಾರ ಸಮಿತಿ ಅಧ್ಯಕ್ಷ, ಸಿದ್ದಾಪುರ ವನ್ಯಜೀವಿ ಉಪವಿಭಾಗದ ಎಸಿಎಫ್ ಪ್ರಕಾಶ್ ಪೂಜಾರಿ, ಮಂಗಳೂರು ವೃತ್ತದ ವಲಯ ಅರಣ್ಯಾಧಿಕಾರಿಗಳು, ಸಿಬಂದಿವರ್ಗದವರು ಉಪಸ್ಥಿತರಿದ್ದರು.

ಸಮ್ಮಾನ:

ಹಲವು ವರ್ಷಗಳಿಂದ ಕೂಟಗಳಲ್ಲಿ ಭಾಗವಹಿಸುತ್ತಿರುವ ಸುಬ್ರಹ್ಮಣ್ಯ ಉಪವಿಭಾಗದ ಸ. ಅರಣ್ಯ ಸಂರಕ್ಷಣಾಧಿಕಾರಿ, ಕ್ರೀಡಾ ಸಮಿತಿ ಅಧ್ಯಕ್ಷ  ಪ್ರವೀಣ್‌ಕುಮಾರ್ ಶೆಟ್ಟಿ ಮತ್ತು ರಾಷ್ಟ್ರೀಯ ಕ್ರೀಡಾಳು ಸ್ನೇಹಾ ಎಸ್.ಎಸ್. ಅವರನ್ನು ಸಮ್ಮಾನಿಸಲಾಯಿತು.

ಕೆಲವು ಆಟೋಟಗಳನ್ನು ವಿದ್ಯಾಗಿರಿಯಲ್ಲಿ ಯೂ ನಡೆಸಲಾಯಿತು.

  ಮಂಗಳೂರು ವಿಭಾಗದ ಉಪ  ಅರಣ್ಯಸಂರಕ್ಷಣಾಧಿಕಾರಿ ಅಂಥೋನಿ ಎಸ್. ಮರಿಯಪ್ಪ ಸ್ವಾಗತಿಸಿದರು. ಸ್ವಾಗತ, ವಸತಿ ಸಮಿತಿ ಅಧ್ಯಕ್ಷ , ಮಂಗಳೂರು ಉಪವಿಭಾಗ ಎಸಿಎಫ್ ಶ್ರೀಧರ ಪಿ. ನಿರೂಪಿಸಿದರು.

ವಸತಿ ಸಮಿತಿ ಅಧ್ಯಕ್ಷ, ಮೂಡುಬಿದಿರೆ ಉಪವಿಭಾಗದ ಎಸಿಫ್ ಸತೀಶ್ ಎನ್. ವಂದಿಸಿದರು.

Post a Comment

0 Comments