ಧರ್ಮ ಸಂರಕ್ಷಣಾ ಯಾತ್ರೆಗೆ ಅಭೂತಪೂರ್ವ ಚಾಲನೆ:ಕೊಲ್ಲೂರಿನಿಂದ ಹೊರಟ ಯಾತ್ರೆಗೆ ಚಾಲನೆ ನೀಡಿದ ಅಣ್ಣಪ್ಪ ಹೆಗ್ಡೆ
ಧರ್ಮಸ್ಥಳ ಮಂಜುನಾಥೇಶ್ವರ ಸನ್ನಿಧಿಯ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಖಂಡಿಸಿ ಆಯೋಜಿಸಲಾದ ಧರ್ಮ ಸಂರಕ್ಷಣಾ ಯಾತ್ರೆಯು ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಾನದಿಂದ ಅಭೂತಪೂರ್ವವಾಗಿ ಚಾಲನೆ ಪಡೆದಿದೆ.
ಧಾರ್ಮಿಕ ಮುಂದಾಳು ಬಸ್ರೂರು ಅಣ್ಣಪ್ಪ ಹೆಗ್ಗಡೆಯವರಿಂದ ಚಾಲನೆ ಪಡೆದ ಯಾತ್ರೆ ಇಂದು ಸಾಲಿಗ್ರಾಮ, ಉಡುಪಿ, ಪಡುಬಿದ್ರಿ ಮಾರ್ಗವಾಗಿ ಮಂಗಳೂರಿನ ಕದ್ರಿ ದೇವಸ್ಥಾನ ತಲುಪಲಿದೆ.
ನಾಳೆ ಅಂದರೆ ಆದಿತ್ಯವಾರ ಬೆಳಿಗ್ಗೆ ಕದ್ರಿ ದೇವಾಲಯದಿಂದ ಹೊರಡುವ ಯಾತ್ರೆ ಉಜಿರೆಗೆ ಆಗಮಿಸಿ ಅಲ್ಲಿಂದ ಸಾವಿರಾರು ಸಂಖ್ಯೆಯ ಭಕ್ತಾದಿಗಳೊಂದಿಗೆ ಪಾದಯಾತ್ರೆ ಮೂಲಕ ಧರ್ಮಸ್ಥಳ ತಲುಪಲಿದೆ.
0 Comments