ನಿಧನ
ಪಾಲಡ್ಕ ಸಾನದಮನೆ ಶ್ರೀಧರ ಶೆಟ್ಟಿ
ಮೂಡುಬಿದಿರೆ
ಜೂ.೬: ಪಾಲಡ್ಕ ಕೊಡಮಣಿತ್ತಾಯ ದೈವಸ್ಥಾನದ ಮುಕ್ಕಾಲ್ದಿಯಾಗಿ ಸೇವೆ ಸಲ್ಲಿಸುತ್ತಿದ್ದ , ರಾಜ್ಯ ಸಂಸ್ಕಾರ ಭಾರತಿ ಪ್ರಶಸ್ತಿ ಪುರಸ್ಕೃತ, ಪಾಲಡ್ಕ ಸಾನದಮನೆ ಶ್ರೀಧರ ಶೆಟ್ಟಿ (80)
ಜೂ. 6 ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, 3 ಪುತ್ರರು, ಓರ್ವ ಪುತ್ರಿ
ಯನ್ನಗಲಿದ್ದಾರೆ.
ಪಾಲಡ್ಕ, ಮುಂಡ್ರುದೆ, ಪರಾಡಿ, ನಿಡ್ಡೋಡಿ, ಬೋಳ ಪರಾರಿ ಮೊದಲಾದ ಐದಾರು ಗ್ರಾಮಗಳ ಗುತ್ತುಮನೆತನಗಳ ದೈವಗಳ ಮುಕ್ಕಾಲ್ದಿಯಾಗಿ ಅವರು ಸೇವೆ ಸಲ್ಲಿಸಿದ್ದರು.
ಶಾಸಕ ಉಮಾನಾಥ ಎ. ಕೋಟ್ಯಾನ್,
ತುಳು ಸಾಹಿತ್ಯ ಅಕಾಡೆಮಿ ನಿರ್ಗಮನ ಅಧ್ಯಕ್ಷ ದಯಾನಂದ ಜಿ. ಕತ್ತಲ್ ಸಾರ್,
ಪಾಲಡ್ಕ ಕೊಡಮಣಿತ್ತಾಯ ದೈವಸ್ಥಾನದ ಅಧ್ಯಕ್ಷ, ಗ್ರಾ.ಪಂ. ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ,
ದ.ಕ.ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಸಹಿತ ಗಣ್ಯರು ಶ್ರೀಧರ ಶೆಟ್ಟಿ ಅವರ ನಿಧನಕ್ಕೆ ಸಂತಾಪ ಸಲ್ಲಿಸಿದ್ದಾರೆ.
0 Comments