ಕೋಟ್ಯಾನ್ ಮತಪ್ರಚಾರಕ್ಕೆ ನಾಳೆ ಹಿಮಾಂತ್ ಬಿಸ್ವಾ ಶರ್ಮಾ ಮೂಡುಬಿದಿರೆಗೆ
ಮೂಡುಬಿದಿರೆ: ಮೂಲ್ಕಿ-ಮೂಡುಬಿದಿರೆಯ ಬಿಜೆಪಿ ಅಭ್ಯರ್ಥಿ ಸೇವಕನೆಂದೇ ಗುರುತಿಸಿಕೊಂಡಿರುವ ಉಮಾನಾಥ ಎ.ಕೋಟ್ಯಾನ್ ಅವರ ಚುನಾವಣಾ ಪ್ರಚಾರಕ್ಕಾಗಿ ಹಿಂದೂ ಫೈರ್ ಬ್ರಾಂಡ್ ಅಸ್ಸಾಂನ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾ ಶರ್ಮಾ ನಾಳೆ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ.
ಸಂಜೆ ನಾಲ್ಕು ಗಂಟೆಗೆ ಶಿರ್ತಾಡಿ ಜಂಕ್ಷನ್ ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಶರ್ಮಾ ಅವರು ಭಾಗವಹಿಸಿ ಮಾತನಾಡಲಿದ್ದಾರೆ.
ನಂತರ ಕೋಟ್ಯಾನ್ ಪರವಾಗಿ ಮತಯಾಚಿಸಲಿದ್ದಾರೆ.
ಬಿಜೆಪಿ ಮುಖಂಡರುಗಳು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
0 Comments