ಮೂಡುಬಿದಿರೆ ಪೇಟೆಯಲ್ಲಿ ಉಮಾನಾಥ ಕೋಟ್ಯಾನ್ ಮತಪ್ರಚಾರ
ಮೂಡುಬಿದಿರೆ: ವಿಧಾನಸಭಾ ಚುನಾವಣೆ ಅಂಗವಾಗಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಅವರು ಶುಕ್ರವಾರ ಬೆಳಿಗ್ಗೆ ಮೂಡುಬಿದಿರೆ ಪೇಟೆಯಲ್ಲಿರುವ ಅಂಗಡಿ ಮಳಿಗೆ, ಆಟೋ ಪಾಕ್ ೯ , ಬಸ್ ನಿಲ್ದಾಣ ಮುಂತಾದ ಕಡೆಗಳಿಗೆ ಭೇಟಿ ನೀಡಿ ಮತ ಪ್ರಚಾರ ನಡೆಸಿದರು.
ಅವರು ಮತಯಾಚಿಸಿದರು.
ಮೂಡುಬಿದಿರೆ ಬಸ್ ನಿಲ್ದಾಣದ ಬಳಿ ಇರುವ ಬೂಟ್ ಬಜಾರ್ ನೊಳಗೆ ಕೋಟ್ಯಾನ್ ಅವರು ಪ್ರವೇಶಿಸುತ್ತಿದ್ದಂತೆ ಹೂಮಳೆಯನ್ನು ಸುರಿಸಿ , ಚೆಂಡು ಹೂವಿನ ಹಾರ ಹಾಕಿ ಸ್ವಾಗತಿಸಿದರು.
ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಉಪಾಧ್ಯಕ್ಷೆ ಸುಜಾತ ಶಶಿಕಿರಣ್, ಸದಸ್ಯರಾದ ರಾಜೇಶ್ ನಾಯ್ಕ್, ಸ್ವಾತಿ ಪ್ರಭು, ಸೌಮ್ಯ ಶೆಟ್ಟಿ, ದಿವ್ಯಾ ಜಗದೀಶ್, ಶ್ವೇತಾ ಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬಿಜೆಪಿ ಮುಖಂಡರಾದ ಕಸ್ತೂರಿ ಪಂಜ, ಕೃಷ್ಣರಾಜ ಹೆಗ್ಡೆ,ಜೊಯ್ಲಸ್ ತಾಕೋಡೆ,ಮೇಘನಾಥ ಶೆಟ್ಟಿ, ಲಕ್ಷ್ಮಣ್ ಪೂಜಾರಿ, ಜಯಾನಂದ ಮೂಲ್ಕಿ,ಗೋಪಾಲ್ ಶೆಟ್ಟಿಗಾರ್, ಅಜಯ್ ರೈ, ಹರೀಶ್ ಎಂ.ಕೆ, ಸಾಣೂರು ಸತೀಶ್ ಸಾಲ್ಯಾನ್, ಮತ್ತಿತರರು ಈ ಸಂದರ್ಭದಲ್ಲಿದ್ದರು.
0 Comments