ಜೂನ್ 4 ರಂದು ಮೂಡುಬಿದಿರೆ ಹಿರೇ ಅಮ್ಮನವರ ಬಸದಿಗೆ ನೂತನ ಧ್ವಜದಂಡ ಆಗಮನ

ಜಾಹೀರಾತು/Advertisment
ಜಾಹೀರಾತು/Advertisment

 ಜೂನ್ 4 ರಂದು ಮೂಡುಬಿದಿರೆ ಹಿರೇ ಅಮ್ಮನವರ ಬಸದಿಗೆ ನೂತನ ಧ್ವಜದಂಡ ಆಗಮನ



ಮೂಡುಬಿದಿರೆ: ಇಲ್ಲಿನ ಹಿರೇ ಅಮ್ಮನವರ ಬಸದಿಯ ಜೀರ್ಣೋದ್ಧಾರದ ಸಂದರ್ಭದಲ್ಲಿ ಸಮರ್ಪಿಸಲಾಗುವ ನೂತನ ಧ್ವಜದಂಡವನ್ನು ಮಾಳದ ಮಂಜಲ್ತಾರ್ ನಿಂದ ಭಾನುವಾರ ( ಜೂ.4) ದಂದು ಮೂಡುಬಿದಿರೆಗೆ ತರಲಾಗುವುದೆಂದು ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ತಿಳಿಸಿದರು.


ಮಂಗಳವಾರ ಸಂಜೆ ಅಮ್ಮನವರ ಬಸದಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮವು ಮೂಡುಬಿದಿರೆ ಶ್ರೀ ಜೈನಮಠದ ಭಾರತ ಭೂಷಣ ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿಯವರ ಶುಭಾ ಆಶೀರ್ವಾಗಳೊಂದಿಗೆ ನಡೆಯಲಿದೆ. ವಾಸ್ತುತಜ್ಞ ಶ್ರೀ ಸುದರ್ಶನ ಇಂದ್ರ ಇವರ ಮಾರ್ಗದರ್ಶನದಲ್ಲಿ ಹಾಗೂ ಗುಣವರ್ಮ ಇಂದ್ರರ ಪೌರೋಹಿತ್ಯದಲ್ಲಿ ನಡೆಯಲಿದೆ.

 ರವಿವಾರ ಬೆಳಗ್ಗೆ ಗಂಟೆ 09.45

ಕಾರ್ಕಳ ಶ್ರೀ ಜೈನ ಮಠದ ಸ್ವಸ್ತಿಶ್ರೀ ಲಲತಕೀರ್ತಿಭಟ್ಟಾರಕರ ಶುಭಾಶೀರ್ವಾದಗಳೊಂದಿಗೆ ರಾಜೇಂದ್ರ ಬಲ್ಲಾಳ್ ಇವರು ಪುಷ್ಪಾರ್ಚನೆಯ ಮೂಲಕ ಧ್ವಜದಂಡದ ಸಾಲಂಕೃತ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸಾಲಂಕೃತ ವಾಹನದಲ್ಲಿ ಮಾಳ -ಹುಕ್ರಟ್ಟೆಯಿಂದ ಹೊರಟು ಬಜಗೋಳಿ, ನಲ್ಲೂರು ಕ್ರಾಸ್- ಚೆಂಡೆ ಬಸದಿ ಕ್ರಾಸ್,

ನೆಲ್ಲಿ ಕಾರು, ಹೊಸ್ಮಾರ್, ಅಳಿಯೂರು, ಶಿರ್ತಾಡಿ, ಹುಕ್ಕುದಕಟ್ಟೆ ವಾಲ್ದಾಡಿ ಕ್ರಾಸ್ ಕೊಣಾಜೆ ಮಾರ್ಗವಾಗಿ ಅಪರಾಹ್ನ 3.00 ಗಂಟೆಗೆ ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ಬಳಿಗೆ ಬರಲಿದೆ.

ಕೋಟೆ ಬಾಗಿಲಿನ ವೀರಮಾರುತಿ ದೇವಳದ ಬಳಿಯಲ್ಲಿ ಬೆಟ್ಕೇರಿ ಬಿ ವಿಮಲ್ ಕುಮಾರ್ ಇವರು ಪುಷ್ಪಾರ್ಚನೆ ಮಾಡುವ ಮೂಲಕ ಮೂಡುಬಿದಿರೆಗೆ ಧ್ವಜದಂಡವನ್ನು ಸ್ವಾಗತಿಸಲಿದ್ದಾರೆ. ನಂತರ ವೈಭವಯುತ ಮೆರವಣಿಗೆಯೊಂದಿಗೆ ಧ್ವಜದಂಡವು ಹಿರೇ ಅಮ್ಮನವರ ಬಸದಿಗೆ ತಲುಪಲಿದೆ ಎಂದು ತಿಳಿಸಿದರು.


ಈಗಾಗಲೇ ಗರ್ಭಗುಡಿಯಲ್ಲಿರುವ ಜಿನಬಿಂಬಗಳನ್ನು ಬಾಲಾಲಯಕ್ಕೆ ಸ್ಥಳಾಂತರಿಸಿದ್ದು ಗರ್ಭಗುಡಿಯ ಗಾರೆ ಕೆಲಸ ಅತ್ಯಂತ ಸುಂದರ ಮರದ ಕೆತ್ತನೆಯ ದೇವಕೂಟ ಮುಂತಾದ ಕೆಲಸಗಳು ಸುಮಾರು 20 ಲಕ್ಷದಲ್ಲಿ ಸಂಪೂರ್ಣಗೊಂಡಿದ್ದು ಉಳಿದ ಕೆಲಸಗಳು ವೇಗವಾಗಿ ನಡೆಯುತ್ತಿವೆ. ...ಇನ್ನೂ 50ರಿಂದ 60ಲಕ್ಷ ದಷ್ಟು ದೇಣಿಗೆಯ ಅಗತ್ಯವಿದ್ದು ಡಿಸೆಂಬರ್ ತಿಂಗಳಿನ ಒಳಗೆ ಬಸದಿಯ ಸಂಪೂರ್ಣ ಕೆಲಸಗಳು ಪೂರ್ತಿ ಮಾಡಿ ಬಿಂಬ ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರು ಸಹಕಾರ ನೀಡಬೇಕೆಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜವರ್ಮ ಬೈಲಂಗಡಿ ತಿಳಿಸಿದರು.

  ಉಪಾಧ್ಯಕ್ಷರುಗಳಾದ ಸುಧೀಶ್ ಕುಮಾರ್ ಆನಡ್ಕ, ಚೌಟರ ಅರಮನೆಯ ಕುಲದೀಪ್ ಎಂ, ಶೈಲೇಂದ್ರ ಕುಮಾರ್ "ಆರೋಹ", ಕಾರ್ಯದರ್ಶಿ ರಂಜಿತ್ ತಮನಂಗಡಿ, ಖಜಾಂಜಿ ಅನಂತಕೇಸರಿ ಕಟ್ಟೆಮಾರ್, ದಿನೇಶ್ ಕುಮಾರ್ ಆನಡ್ಕ , ಸಮಿತಿ ಸದಸ್ಯ ಸೂರಜ್ ಅರಿಗ, ಪ್ರಚಾರ ಸಮಿತಿಯ ಪ್ರಭಾತ್ ಬಲ್ನಾಡ್ ಹಾಗೂ ಅರ್ಚಕ ಗುಣವರ್ಮ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Post a Comment

0 Comments