ಜಂಬೂರಿ ಕಾರ್ಯಕ್ರಮ ದ ಪ್ರಯುಕ್ತ ಈದು ಗ್ರಾಮದ ಪಂಚಾಯತ್ ಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಜಾಹೀರಾತು/Advertisment
ಜಾಹೀರಾತು/Advertisment

 ಈದು ಗ್ರಾಮ ಪಂಚಾಯತ್ ಮತ್ತು ವಿವಿಧ ಸಂಘ  ಸಂಸ್ಥೆಗಳ ಸಹಕಾರದೊಂದಿಗೆ  ಆಳ್ವಾಸ್ ನ ಜಾಂಬೂರಿ ಕಾರ್ಯಕ್ರಮದ ಪ್ರಯುಕ್ತ ಈದು ಗ್ರಾಮ ಪಂಚಾಯತ್  ವ್ಯಾಪ್ತಿಯಲ್ಲಿ ದಿನಾಂಕ:22/12/2022 ರಂದು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಜಯಂತಿ ಇವರ  ಅದ್ಯಕ್ಷತೆಯಲ್ಲಿ  ನಡೆಯಿತು ಕಾರ್ಯಕ್ರಮದ  ಉದ್ಘಾಟನೆಯನ್ನು ಡಾ. ಪ್ರಸಾದ್ ಬಿ ಶೆಟ್ಟಿ ವಿಜಯ ಕ್ಷಿನಿಕ್  ಹೊಸ್ಮಾರು ಇವರು ನೆರೆವೇರಿಸಿದರು  ಈ ಸಂಧರ್ಭದಲ್ಲಿ ಈದು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀ ಎನ್ ವಿಜಯ್ ಕುಮಾರ್ ,ಗ್ರಾ.ಪಂ.ಸದಸ್ಯರು , ವೈದ್ಯಾಧಿಕಾರಿವರು,   ವಿವಿಧ ಶಾಲಾ ಮುಖ್ಯೋಪಾಧ್ಯಯರು, ಅಂಗನವಾಡಿ, ಮತ್ತು ಆಶಾ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳ ಮುಖ್ಯಸ್ಥರು , ಸಂಜೀವಿನಿ  ಒಕ್ಕೂಟ್ಟದ ಸದಸ್ಯರು ,ಆಳ್ವಾಸ್ ಸ್ಕೌಟ್ಸ್ ಗೈಡ್ಸ್  250 ವಿದ್ಯಾರ್ಥಿಗಳು , ಜವನೆರ್ ಬೆದ್ರ ಸಂಘದ ಸದಸ್ಯರು, ಹೊಸ್ಮಾರು ಕೆ.ಪಿ.ಎಸ್ ಶಾಲಾ ವಿದ್ಯಾರ್ಥಿಗಳು ಗುರುಕೃಪಾ ಸೆಂಟ್ರಲ್ ವಿದ್ಯಾರ್ಥಿಗಳು , ಗ್ರಾ.ಪಂ. ಕಾರ್ಯದರ್ಶಿ ಮತ್ತು ಸಿಬ್ಬಂದಿ ವರ್ಗ, ಎಸ್ ಎಲ್ ಆರ್ ಎಂ  ಸಿಬ್ಬಂದಿ ಸ್ವಚ್ಛತಾ   ಕಾರ್ಯಕ್ರಮದಲ್ಲಿ ಭಾಗವಹಿಸಿದರು   ಕಾರ್ಯಕ್ರಮದ  ನಿರೂಪಣೆ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು  ಶ್ರೀ ಸುಧೀಶ್ ರಾವ್  ನೆರವೇರಿಸಿದರು.


Post a Comment

0 Comments