ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರಿಗೆ ಗುಡ್ ನ್ಯೂಸ್: ಸಚಿವ ಕೋಟ ಹೋರಾಟಕ್ಕೆ ಫಲಶ್ರುತಿ

ಜಾಹೀರಾತು/Advertisment
ಜಾಹೀರಾತು/Advertisment

ರಾಜ್ಯದ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಗೌರವಧನ ಹೆಚ್ಚಿಸಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದ್ದು ಈ ಸಂಬಂಧ ಆದೇಶ ಹೊರಡಿಸಿದೆ.


ಪಂಚಾಯತ್ ರಾಜ್ ಜನ ಪ್ರತಿನಿಧಿಗಳ ಮೂಲಕ ಚುನಾಯಿತರಾದ ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಈ ಬಗ್ಗೆ ನಿರಂತರವಾಗಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದರು. ಪಂಚಾಯತಿ ಸದಸ್ಯರಿಗೆ ಗೌರವಧನ ಒದಗಿಸಲು ಆರಂಭಿಕ ಹೋರಾಟ ಮಾಡಿದವರೇ ಕೋಟ ಶ್ರೀನಿವಾಸ ಪೂಜಾರಿಯವರು.

ಬದಲಾದ ಕಾಲದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಈ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿಸುವ ಭರವಸೆ ನೀಡಿದ್ದ ಸಚಿವರು ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರು. ಇದೀಗ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ 6000, ಉಪಾಧ್ಯಕ್ಷರಿಗೆ 4000 ಹಾಗೂ ಸದಸ್ಯರಿಗೆ 2000 ರೂಪಾಯಿ ದೊರಕಿಸಿಕೊಡುವ ಬಗ್ಗೆ ತಿಳಿಸಿದೆ.

 

Post a Comment

0 Comments