ಮುಂಬೈ: ಮುಂಬೈನಲ್ಲಿ ನೈಜೀರಿಯಾ ಮೂಲದ ಡ್ರಗ್ ದಂಧೆಕೋರರನ್ನು ಬೆನ್ನಟ್ಟಿ ಅಸಾಧಾರಣ ಶೌರ್ಯ ಪ್ರದರ್ಶಿಸಿದ್ದಕ್ಕಾಗಿ ಮುಂಬೈ ಕಸ್ಟಮ್ಸ್ನ ನೇರ ತೆರಿಗೆ ವಿಭಾಗದ ಉಪ ನಿರ್ದೇಶಕಿ, ಕರಾವಳಿಯ ಗಟ್ಟಿಗಿತ್ತಿ ಡಿಆರ್ಐ ಮಿಶಾಲ್ ಸ್ಟೀನಿ ಡಿ'ಕೋಸ್ಟಾ ಅವರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
2015ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಗಳೂರಿನ ನಿದ್ದೋಡಿ ಗ್ರಾಮದ ನೀರುಡೆಯ ಮಿಶಾಲ್ ಸ್ಟೀನಿ ಡಿ'ಕೋಸ್ಟ 387ನೇ ಬ್ಯಾಂಕ ಪಡೆದಿದ್ದು, ಮಿಶಾಲ್ ಅವರು ಲಾಜರಸ್ ಡಿ'ಕೋಸ್ನ -ನ್ಯಾನ್ಸಿ ಡಿ'ಕೋಸ್ನ ಅವರ ದ್ವಿತೀಯ ಪುತ್ರಿಯಾಗಿದ್ದಾರೆ.
2015ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಮಂಗಳೂರಿನ ನಿದ್ದೋಡಿ ಗ್ರಾಮದ ನೀರುಡೆಯ ಮಿಶಾಲ್ ಸ್ಟೀನಿ ಡಿ'ಕೋಸ್ಟ 387ನೇ ಬ್ಯಾಂಕ ಪಡೆದಿದ್ದು, ಮಿಶಾಲ್ ಅವರು ಲಾಜರಸ್ ಡಿ'ಕೋಸ್ಟ -ನ್ಯಾನ್ಸಿ ಡಿ'ಕೋಸ್ಟ ಅವರ ದ್ವಿತೀಯ ಪುತ್ರಿಯಾಗಿದ್ದಾರೆ.
ಇವರು ಪ್ರಸ್ತುತ ಮುಂಬೈ ಕಸ್ಟಮ್ಸ್ನ ನೇರ ತೆರಿಗೆ ವಿಭಾಗದ ಉಪ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಾರ್ಯಾಚರಣೆ ಮಾಡುತ್ತಿರುವಾಗ ನೈಜೀರಿಯಾದ ಡ್ರಗ್ ಪೆಡ್ಲರ್ಗಳು 1.9 ಕೆಜಿ ಡ್ರಗ್ ಮಾತ್ರೆಗಳೊಂದಿಗೆ ಸಿಕ್ಕಿಬಿದ್ದಿದ್ದು, ಈ ವೇಳೆ ಡ್ರಗ್ ಪೆಡ್ಲರ್ಗಳು ಕಟ್ಟಡದ ಮೇಲ್ಬಾವಣಿಯಿಂದ ಜಿಗಿದು ತಪ್ಪಿಸಿಕೊಳ್ಳಲು
ಯತ್ನಿಸಿದಾಗ ಮಿಶಾಲ್ ಅವರು ಆರೋಪಿಗಳನ್ನು ಬೆನ್ನಟ್ಟಿ ಬಂಧಿಸಿದ್ದು, ಅವರ ಸಾಹಸಕ್ಕೆ ಡಿಆರ್ಐ ಸಂಸ್ಥಾಪನಾ ದಿನದಂದು ಶೌರ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಕರಾವಳಿ ಯುವತಿಯ ಈ ಸಾಹಸಕ್ಕೆ ಸಿಕ್ಕ ಪ್ರಶಸ್ತಿ ತುಳುನಾಡಿಗೆ ಕೀರ್ತಿ ತಂದಿದೆ.
0 Comments