ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ಇತಿಹಾಸದಲ್ಲಿಯೇ ಮೊದಲ ಬಾರಿ ಶೂನ್ಯ ತ್ಯಾಜ್ಯ ಕಂಬಳದ ಆಕರ್ಷಣೆ

ಜಾಹೀರಾತು/Advertisment
ಜಾಹೀರಾತು/Advertisment

 




ಮೂಡುಬಿದಿರೆ:ಮೂಡುಬಿದಿರೆ ಕಡಲಕೆರೆಯ ನಿಸರ್ಗಧಾಮದ, ವೀರರಾಣಿ ಅಬ್ಬಕ್ಕ ಸಂಸ್ಕೃತಿಕ
ಗ್ರಾಮ ಒಂಟಿಕಟ್ಟೆಯಲ್ಲಿ ನಡೆಯುತ್ತಿರುವ ಇಪ್ಪತ್ತನೇ ವರ್ಷದ ಜೋಡುಕರೆ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳವನ್ನು ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಮೂಡುಬಿದಿರೆ ಪುರಸಭೆ ಹಾಗೂ ಜೋಡುಕರೆ ಕಂಬಳ ಸಮಿತಿ ವತಿಯಿಂದ ಶೂನ್ಯತ್ಯಾಜ್ಯವನ್ನಾಗಿಸುವ ಸಲುವಾಗಿ ಕಂಬಳಕ್ಕೆ ಆಗಮಿಸಿರುವ ವ್ಯಾಪಾರಸ್ಥರನ್ನು ಮುಂಚೆಯೇ ಸಭೆಯನ್ನು ಕರೆದು ತಿಳಿಸಲಾಗಿದ್ದು, ಇಂದು ವ್ಯಾಪಾರಸ್ಥರೆಲ್ಲರಿಗೂ ಪ್ಲಾಸ್ಟಿಕ್‌ನ ಬದಲಾಗಿ ನೈಸರ್ಗಿಕದತ್ತವಾದ ವಸ್ತುಗಳಾದ ಅಡಿಕೆ ಹಾಳೆಯ ತಟ್ಟೆಗಳು, ಸಣ್ಣ ಬೌಲ್ ಹಾಗೂ ಗೆರಟೆಗಳನ್ನು ಬಳಸಿ ವ್ಯಾಪಾರ ನಡೆಸುತ್ತಿದ್ದಾರೆ.
ಕಲ್ಲಂಗಡಿ ಮಾರಾಟಗಾರರಿಗೆ 10,000 ಅಡಿಕೆ ಹಾಳೆಯ ತಟ್ಟೆಗಳನ್ನು, ಸ್ವೀಟ್ ಕಾರ್ನ್ ಮಾರಾಟಗಾರರಿಗೆ 5000 ಬೌಲ್‌ಗಳು ಹಾಗೂ 4000 ಅದಕ್ಕಿಂತ ದೊಡ್ಡ ಬೌಲ್‌ಗಳನ್ನು ಈಗಾಗಲೇ ಮಾರಾಟಗಾರರಿಗೆ  ಕಡಿಮೆ ದರದಲ್ಲಿ  ನೀಡಲಾಗಿದೆ. ಹಾಗೂ ಐಸ್ ಕ್ರೀಂ ವ್ಯಾಪಾರಸ್ಥರು ಐಸ್‌ಕ್ರೀಂ ಮಾರಾಟ ಮಾಡುವಾಗ ಅದರ ಕವರನ್ನು ತೆಗೆದು ಅದನ್ನು ಅಲ್ಲಿಯೇ ವ್ಯವಸ್ಥಿತವಾಗಿ ಹಾಕುವ ವ್ಯವಸ್ಥೆ ಮಾಡಲಾಗಿದೆ.  ಅಷ್ಟು ಮಾತ್ರವಲ್ಲದೇ ಪ್ಲಾಸ್ಟಿಕ್ ಪೆನ್ನುಗಳ ಬದಲಿಗೆ ಪೇಪರ್ ಪೆನ್ನನ್ನು ಮಾರಾಟ ಮಾಡಲಾಗುತ್ತಿದೆ. ಆದಷ್ಟು ಪ್ಲಾಸ್ಟಿಕ್ ಮುಕ್ತ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಇಲ್ಲಿಗೆ ಆಗಮಿಸಿದ ವ್ಯಾಪಾರಸ್ಥರು ಸಂಪೂರ್ಣವಾಗಿ ಸಹಕಾರವನ್ನು ನೀಡುತ್ತಿದ್ದಾರೆ. ಇಲ್ಲಿಗೆ ಬರುವ ಕಂಬಳಭಿಮಾನಿಗಳು ಕೂಡಾ ಉತ್ತಮ ರೀತಿಯಲ್ಲಿ ಸಹಕಾರವನ್ನು ನೀಡುತ್ತಿದ್ದಾರೆ.
ಈ ನೈಸರ್ಗಿಕದತ್ತವಾದ ಅಡಿಕೆ ಹಾಳೆಗಳು, ಬೌಲ್‌ಗಳು ಖಾಲಿಯಾದರೂ ಅದಕ್ಕೆ ವ್ಯವಸ್ಥಿತ ರೀತಿಯಲ್ಲಿ ಪೂರೈಕೆ ಮಾಡುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ.
 ಪುರಸಭಾಧ್ಯಕ್ಷರಾದ ಪ್ರಸಾದ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ವ್ಯಾಪಾರಸ್ಥರು ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಸಂಪೂರ್ಣವಾಗಿ ಸಹಕಾರವನ್ನು ನೀಡಿದ್ದು, ಪ್ಲಾಸ್ಟಿಕ್ ವಸ್ತುಗಳ ಬದಲಿಗೆ ನೈಸರ್ಗಿಕವಾಗಿ ದೊರೆಯುವ ಅಡಿಕೆ ಹಾಳೆಗಳ ಬೌಲ್, ತಟ್ಟೆ, ಸ್ಟೀಲ್ ಲೋಟ, ಬಟ್ಟಲು ಹಾಗೂ ಗ್ಲಾಸುಗಳನ್ನು ಬಳಕೆ ಮಾಡುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಕಂಬಳಾಭಿಮಾನಿಗಳು ಆದಷ್ಟು ಮನೆಯಿಂದಲೇ ಕೈಚೀಲವನ್ನು ತಂದು ಸಹಕರಿಸಬೇಕು. ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಕಂಬಳಾಭಿಮಾನಿಗಳ ಸಂಪೂರ್ಣವಾಗಿ ಬೆಂಬಲವನ್ನು ನೀಡಬೇಕೆಂದರು.
ಸ್ವಚ್ಛತಾ ರಾಯಭಾರಿಗಳಾದ ಜೈನ ಪದವಿ ಪೂರ್ವ ಕಾಲೇಜಿನ ಸಂಧ್ಯಾ ಅವರು ಶೂನ್ಯ ತ್ಯಾಜ್ಯ ಕಂಬಳದ ಬಗ್ಗೆ ವಿಶೇಷ ಕಾಳಜಿಯನ್ನು ತೋರಿ ತಮ್ಮ ವಿದ್ಯಾರ್ಥಿಗಳನ್ನು ಜತೆಗೂಡಿಸಿಕೊಂಡು, ಕಂಬಳಾಭಿಮಾನಿಗಳು ಆದಷ್ಟು ಕೈಚೀಲವನ್ನು ತಂದು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಹಾಗೂ ಇನ್ನೋರ್ವ ಸ್ವಚ್ಛತಾ ರಾಯಭಾರಿಯಾದ ಗೋಪಾಲ ಅವರು ಶೂನ್ಯ ತ್ಯಾಜ್ಯದ ಕಂಬಳದಲ್ಲಿ ವ್ಯಾಪಾರಸ್ಥರಿಗೆ ಮುಂಚೆಯೇ ಮಾಹಿತಿಯನ್ನು ನೀಡಿ ವ್ಯಾಪಾರಸ್ಥರು ಪ್ಲಾಸ್ಟಿಕ್ ಮುಕ್ತ ಶೂನ್ಯ ತ್ಯಾಜ್ಯ ಕಂಬಳಕ್ಕೆ ಸಾಥ್ ನೀಡಿದ್ದಾರೆ.
ಈ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ಕಂಬಳ ಸಮಿತಿ ಹಾಗೂ ಪುರಸಭೆಯು ಸಂಪೂರ್ಣವಾಗಿ ಸಹಕಾರವನ್ನು ನೀಡಿದ್ದು ಈ ಬಾರೀಯ ಕಂಬಳವು ವಿಶೇಷವಾಗಿ ಶೂನ್ಯ ತ್ಯಾಜ್ಯ ಕಂಬಳವನ್ನಾಗಿಸಲು ವಿಶೇಷ ಪ್ರಯತ್ನವನ್ನು ನಡೆಸಿದ್ದಾರೆ.

Post a Comment

0 Comments