ಮೂಡುಬಿದಿರೆಯಿಂದ " ಗೋವಿಗಾಗಿ ಹೊರೆಕಾಣಿಕೆ"

 

ಮೂಡುಬಿದಿರೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮೂಡುಬಿದಿರೆ ಪ್ರಖಂಡದ ವತಿಯಿಂದ ನಡೆದ "ಗೋವಿಗಾಗಿ ಹೊರೆಕಾಣಿಕೆ ಅರ್ಪಣೆ" ಕಾರ್ಯಕ್ರಮಕ್ಕೆ ಆಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಚಾಲನೆ ನೀಡಿದರು.


 ವಿಶ್ವ ಹಿಂದೂ ಪರಿಷತ್ ನ ಕಾರ್ಯಧ್ಯಕ್ಷ ಶ್ಯಾಮ್ ಹೆಗ್ಡೆ, ಕಾರ್ಯದರ್ಶಿ ಸುಚೇತನ್ ಜೈನ್, ದ.ಕ.ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಬಜರಂಗದಳದ ತಾಲೂಕು ಸಂಯೋಜಕ ಅಭಿಲಾಸ್, ಬಜರಂಗದಳದ ಅವಿನಾಶ್, ಸಂಜಯ ಹೆಗ್ಡೆ, ಪ್ರವೀಣ್, ಶೇಖರ್, ಬ್ರಿಜೇಶ್, ವಿಜೇಶ್ ಮತ್ತು ಸಂಘ ಪರಿವಾರದ ಹಿರಿಯರು ಈ ಸಂದರ್ಭದಲ್ಲಿದ್ದರು.

Post a Comment

0 Comments

Advertisement