ಎಂ.ಸಿ.ಎಸ್ ಬ್ಯಾಂಕ್ ಸಹಕಾರಿ ಸಪ್ತಾಹ -2022

ಜಾಹೀರಾತು/Advertisment
ಜಾಹೀರಾತು/Advertisment

 


ಮೂಡುಬಿದಿರೆ: ಮೂಡುಬಿದಿರೆ ಕೋ ಅಪರೇಟಿವ್ ಸರ್ವಿಸ್ ಸೊಸೈಟಿ ಲಿ. ವತಿಯಿಂದ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಸೋಮವಾರ ಸಂಜೆ ನಡೆದ ಸಹಕಾರ ಸಪ್ತಾಹ 2022 ಕಲ್ಪವೃಕ್ಷ ಪ್ರಶಸ್ತಿ ಪ್ರದಾನ, ಸಪ್ತ ಸಂಧ್ಯಾ ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವದ ಉದ್ಘಾಟನೆಯನ್ನು ಹಾಗೂ ಬ್ಯಾಂಕಿನ ವಿಶೇಷ ಯೋಜನೆಗಳಿಗೆ ಶಾಸಕ ಉಮಾನಾಥ್ ಕೋಟ್ಯಾನ್ ಚಾಲನೆಯನ್ನು ನೀಡಿದರು.

ನಂತರ ಮಾತನಾಡಿದ ಅವರು ಸಹಕಾರ ರಂಗದಲ್ಲಿ ತನ್ನ ಸೇವೆ ಸಾಧನೆಳಿಂದ ಮೂಡುಬಿದಿರೆ ಕೋ ಅಪರೇಟಿವ್ ಸರ್ವಿಸ್ ಸೊಸೈಟಿ ರಾಜ್ಯಮಟ್ಟದಲ್ಲಿ ನಂಬಿಕೆಯ ತಳಹದಿಯ ಮೇಲೆ ಬೆಳೆದು ಅನೇಕ ಕುಟುಂಬಗಳಿಗೆ ಸಹಕಾರ ನೀಡುತ್ತಾ ಆಧಾರ ಸ್ಥಂಭವಾಗಿ ನಿಂತಿದೆ. ದೂರದರ್ಶಿತ್ವದ ಅಭಿವೃದ್ಧಿ ಕಾರ್ಯಗಳಿಂದ ಪಕ್ಷದ ವರ್ಚಸ್ಸು ಮೀರಿದ ರಾಜಕಾರಣಿಯಾಗಿ ಬೆಳೆದ ಅಮರನಾಥ ಶೆಟ್ಟಿಯವರು ಬ್ಯಾಂಕಿನ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಮೂಡುಬಿದಿರೆ ಕ್ಷೇತ್ರವನ್ನು ಪ್ರಗತಿಯ ಪಥದಲ್ಲಿ ಮುನ್ನಡೆಸಿದವರು ಎಂದು ಹೇಳಿದರು. 

ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಪಾವನ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಶಿಕ್ಷಣ ವ್ಯವಸ್ಥೆಯಲ್ಲಿ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಿ ಸರ್ಕಾರ ಅಮರನಾಥ ಶೆಟ್ಟಿಯವರನ್ನು ಗೌರವಿಸುವಂತಾಗಲಿ ಎಂದು ನುಡಿದರು.

ಸಹಕಾರಿ ರಂಗದಲ್ಲಿ ಅನನ್ಯ ಸಾಧಕರಾಗಿ, ಎಂ.ಸಿ.ಎಸ್.ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದ ದಿ.ಕೆ. ಅಮರನಾಥ ಶೆಟ್ಟಿಯವರಿಗೆ ಮರಣೋತ್ತರವಾಗಿ ನೀಡಲಾದ ಕಲ್ಪವೃಕ್ಷ ಪ್ರಶಸ್ತಿಯನ್ನು ಅಮರನಾಥ ಶೆಟ್ಟಿಯವರ ಪತ್ನಿ ಜಯಶ್ರೀ ಅಮರನಾಥ ಶೆಟ್ಟಿಯವರಿಗೆ ನೀಡಿ ಗೌರವಿಸಲಾಯಿತು. ಚಿನ್ನದ ಪದಕ, ರಜತ ಸ್ಮರಣಿಕೆ ಶಾಲು, ಹಾರ, ಸ್ಮರಣಿಕೆಗಳೊಂದಿಗೆ ಕಲ್ಪವೃಕ್ಷ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಅಮರನಾಥ ಶೆಟ್ಟಿಯವರ ಪುತ್ರಿಯರಾದ ಅಮರಶ್ರೀ ಮತ್ತು ಆಶ್ರಿತಾ ಈ ಸಂದರ್ಭದಲ್ಲಿದ್ದರು. 

ವಿಶ್ರಾಂತ ಮುಖ್ಯ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆಯವರು ಸಂಸ್ಮರಣಾ ಮಾತುಗಳನ್ನಾಡಿದರು.

ಬ್ಯಾಂಕಿನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು

ಉದ್ಯಮಿ ಕೆ. ಶ್ರೀಪತಿ ಭಟ್, ಚೌಟರ ಅರಮನೆಯ ಕುಲದೀಪ ಎಂ. ಮುಖ್ಯ ಅತಿಥಿಗಳಾಗಿದ್ದರು. ಬ್ಯಾಂಕಿನ ಉಪಾಧ್ಯಕ್ಷೆ ಪ್ರೇಮ ಎಸ್. ಸಾಲ್ಯಾನ್, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಧರಣೇಂದ್ರ ಜೈನ್ ಉಪಸ್ಥಿತರಿದ್ದರು. ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತನ್ನು ವಿತರಿಸಲಾಯಿತು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಸ್ವಾಗತಿಸಿ ನಿರ್ದೇಶಕ ಜಯರಾಮ್ ಕೋಟ್ಯಾನ್  ವಂದಿಸಿದರು.. ವಿನಯ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments