ಮೂಡುಬಿದಿರೆ ತಾಲೂಕಿನ ಪಡುಮಾರ್ನಾಡು ಕುಂಭಕಂಠಿನಿ ಫ್ರೆಂಡ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್ ಅಚ್ಚರಕಟ್ಟೆ ಆಶ್ರಯದಲ್ಲಿ ಮಾರ್ನಾಡು ಮತ್ತು ಆಸುಪಾಸಿನ ಮಕ್ಕಳಿಗೆ ಕುಣಿತ ಭಜನೆ ತರಬೇತಿ ಶಿಬಿರ ಪಡುಮಾರ್ನಾಡು ಗ್ರಾಮ ಪಂಚಾಯತು ಸಭಾಂಗಣದಲ್ಲಿ ಪ್ರಾರಂಭಗೊಂಡಿತು. ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ ದಯಾನಂದ ಪೈ ಇವರ ಅಧ್ಯಕ್ಷತೆಯಲ್ಲಿ ಮಾರ್ನಾಡು ಹೊಯಿಪಾಲ್ ಬೆಟ್ಟ ಆಡಳಿತ ಮೊಕ್ತೇಸರರಾದ ರಾಜೇಶ್ ಬಲ್ಲಾಳ್ ಉದ್ಘಾಟಿಸಿದರು. ಬನ್ನಡ್ಕ ಶಾರಾದೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೂರಜ್ ಜೈನ್, ಕುಂಭಕಂಠಿನಿ ಕ್ಲಬ್ ಅಧ್ಯಕ್ಷ ಪ್ರವೀಣ್ ಆರ್ koty, ಹಾಗು ಊರ ಪ್ರಮುಖರು ಭಾಗವಹಿಸಿದ್ದರು. ಶಿಬಿರದಲ್ಲಿ 127 ಮಕ್ಕಳು ಭಾಗವಹಿಸಿದ್ದರು.
0 Comments