ಮೂಡುಬಿದಿರೆ : ಜಲಜೀವನ್ ಮಿಷನ್ ಯೋಜನೆಯಡಿ ಪುತ್ತಿಗೆ ಗ್ರಾ.ಪಂ.ವ್ಯಾಪ್ತಿಯ ಮುಂಡೇಲು, ಮಂಜೊಲು ಗುಡ್ಡೆ ಹಾಗೂ ಪೆಲತ್ತಡ್ಕ ವ್ಯಾಪ್ತಿಯಲ್ಲಿ 94 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.
ನಂತರ ಮಾತನಾಡಿ,ಮೂಲಭೂತ ಸೌಕರ್ಯವಾಗಿರುವ ಕುಡಿಯುವ ನೀರನ್ನು ಜನರಿಗೆ ಒದಗಿಸಬೇಕೆಂಬುದು ಸರಕಾರದ ಕನಸಿನ ಯೋಜನೆಯಾಗಿದ್ದು, ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಹೋಗಲಾಡಿಸಲು 3 ಟ್ಯಾಂಕ್ ಗಳನ್ನು ನಿರ್ಮಿಸಲಾಗುತ್ತಿದೆ.
ಮೂಡುಬಿದಿರೆ ತಾಲೂಕಿನಾದ್ಯಾಂತ ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ 100 ಕೋಟಿ ವೆಚ್ಚದಲ್ಲಿ ನೀರಿನ ಯೋಜನೆಯನ್ನು ಕೈಗೆತ್ತಿಕೊಂಡಿದ್ದು ಈಗಾಗಲೆ ಡಿಆರ್ ಪಿಯಾಗಿದ್ದು ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.
ಅರ್ಬಿಗುಂಡಿಯಲ್ಲಿ ಡ್ಯಾಮ್ ನ್ನು ನಿರ್ಮಿಸಲಾಗಿದ್ದು,
ಅಲ್ಲಿಯೇ ಸಮೀಪದಲ್ಲಿರುವ ಇರುವ ಬಾವಿಯನ್ನು ದುರಸ್ಥಿಗೊಳಿಸುವಂತೆ ಪುತ್ತಿಗೆ ಪಂಚಾಯತ್ ನ ಅಧ್ಯಕ್ಷರು ಮತ್ತು ಸದಸ್ಯರು ಆಗ್ರಹಿಸಿದ್ದಾರೆ. ಅದರಂತೆ ನೀರಿನ ಅಗತ್ಯತೆ ಇರುವುದರಿಂದ ಇದನ್ನು ದುರಸ್ಥಿಗೊಳಿಸಲಾಗುವುದೆಂದು ಎಂದರು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಪ್ರವೀಣ್ ಶೆಟ್ಟಿ, ಸದಸ್ಯರಾದ ದಿನೇಶ್ ಗೌಡ, ಸುಮಾ ಭಟ್, ಸಾರಿಕಾ, ಅಪ್ಪಿ, ಮಾಜಿ ಅಧ್ಯಕ್ಷ ಉಮಾನಾಥ ಕರ್ಕೇರಾ, ಮಾಜಿ ಸದಸ್ಯರಾದ ನಾಗರಾಜ ಕರ್ಕೇರಾ, ಜಿ.ಪಂ.ಎಂಜಿನಿಯರ್ ಜಗದೀಶ್ ಶೇಟ್, ಗುತ್ತಿಗೆದಾರ ನಟರಾಜ್, ಪುತ್ತಿಗೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕುಮಾರ್ , ಸ್ಥಳೀಯರಾದ ದೇಜಪ್ಪ ಸುವರ್ಣ, ಮಿಥುನ್, ಉದಯ ಶೆಟ್ಟಿ, ಕುಮಾರ್ ಗೌಡ ಹಾಗೂ ಮಾಜಿ ಸೈನಿಕ ಹರೀಶ್ ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.
0 Comments