ಮೂಡುಬಿದಿರೆ: ಕಂಬಳ ಕ್ಷೇತ್ರದ ಸಾಧಕ ಯಜಮಾನ, ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮೂಡುಬಿದಿರೆ ಇರುವೈಲು ಪಾಣಿಲ ಬಾಡ ಪೂಜಾರಿ ವಯೋಸಹಜ ಕಾಯಿಲೆಯಿಂದ ಇಂದು ಮುಂಜಾನೆ ನಿಧನರಾದರು.
ಇವರ ಯಜಮಾನಿಕೆಯ ನೇತೃತ್ವದಲ್ಲಿ ಹಲವಾರು ಕಂಬಳಗಳು ನಡೆದಿದ್ದು, ಇವರ ಕೋಣಗಳು ವಿಶೇಷ ಸಾಧನೆ ಮಾಡಿದ್ದವು.
ಕಂಬಳದ ಉಸೇನ್ ಬೋಲ್ಟ್, ಖ್ಯಾತಿಯ ಅಶ್ವಥ್ ಪುರ ಶ್ರೀನಿವಾಸ್ ಗೌಡರು ಕಂಬಳ ಕ್ಷೇತ್ರದಲ್ಲಿ ಇವರ ಯಾಜಮಾನಿಕೆಯಲ್ಲಿ ವಿಶ್ವದಾಖಲೆಯನ್ನು ಮಾಡಿದ್ದರು.
ಇರುವೈಲು ಪಾಣಿಲ ಬಾಡ ಪೂಜಾರಿ (90) ಪ್ರಗತಿಪರ ಕೃಷಿಕರಾಗಿದ್ದು 23 ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಇವರ ತಾಟೆ ಮತ್ತು ಬೊಟ್ಟಿಮಾರ್ ಕೋಣಗಳು ಕಂಬಳ ಕ್ಷೇತ್ರದಲ್ಲಿ ಅಪಾರ ಅಭಿಮಾನಿಯನ್ನು ಹೊಂದಿದೆ.
ಮಾತ್ರವಲ್ಲ ಕಂಬಳ ಕ್ಷೇತ್ರದಲ್ಲಿ ಇವರ ಕೋಣಗಳು ಮಾಡಿದ ಸಾಧನೆಗೆ ಅನೇಕ ಪದಕಗಳನ್ನು ಪಡೆದುಕೊಂಡಿದ್ದು, ವಿಶ್ವ ದಾಖಲೆಗಳನ್ನು ನಿರ್ಮಾಣ ಮಾಡಿವೆ.
0 Comments