ಮೂಡುಬಿದಿರೆ : ಹದಿ ಹರೆಯದ ಯುವಕನೋರ್ವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಲಡ್ಕ ಗ್ರಾ.ಪಂ.ವ್ಯಾಪ್ತಿಯ ಬಿ.ಟಿ.ರೋಡ್ ನ ನೀರಲ್ಕೆಯಲ್ಲಿ ನಡೆದಿದೆ.
ಸಚ್ಚರಿಪೇಟೆಯ ನಿವಾಸಿ ಬೇಚ ಗೌಡ ಎಂಬವರ ಪುತ್ರ ಹರೀಶ್ (18ವ) ಆತ್ಯಹತ್ಯೆ ಮಾಡಿಕೊಂಡ ಯುವಕ.
ಈತ ಬಿ.ಟಿ.ರೋಡ್ ಬಳಿಯ ಗುಡ್ಡ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
0 Comments